ಸರಣಿ ಅಪಘಾತ: ಅಮಾಯಕ ಜೀವಗಳು ಬಲಿ

326

ಪ್ರಜಾಸ್ತ್ರ ಸುದ್ದಿ

ಹೊಸಪೇಟೆ: ಟ್ರಕ್ ವೊಂದರ ಸ್ಟೇರಿಂಗ್ ಕಟ್ ಆಗಿ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಇವುಗಳ ಹಿಂದೆ ಬರುತ್ತಿದ್ದ ಟಿಪ್ಪರ್ ಸಹ ಅದೇ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 7 ಜನರು ಮೃತಪಟ್ಟ ಘಟನೆ, ಗುಂಡಾ ಅರಣ್ಯ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ನಡೆದಿದೆ.

ಹೊಸಪೇಟೆಯಿಂದ ಚಿತ್ರದುರ್ಗ ಕಡೆ ಹೊರಟಿದ್ದ ಟ್ರಕ್ ನ ಸ್ಟೇರಿಂಗ್ ಕಟ್ ಆಗಿದೆ. ಹೀಗಾಗಿ ಡಿವೈಡರ್ ಡಿಕ್ಕಿ ಹೊಡೆದ ವಿರುದ್ಧ ದಿಕ್ಕಿಗೆ ಬಂದ ಪರಿಣಾಮ ಹರಪ್ಪನಹಳ್ಳಿ ಕಡೆಯಿಂದ ಹೊಸಪೇಟೆಯತ್ತ ಹೊರಟಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದು ಸಾಲದ ಎಂಬಂತೆ ಕಾರು ಹಿಂದೆ ಬರುತ್ತಿದ್ದ ಟಿಪ್ಪರ್ ಸಹ ಕಾರಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಕಾರಿನಲ್ಲಿದ್ದ 7 ಜನರೂ ಮೃತಪಟ್ಟಿದ್ದಾರೆ.

ಭೀಮಲಿಂಗಪ್ಪ(60), ಕೆಂಚಪ್ಪ(60), ಗೋಣಿಬಸಪ್ಪ(55), ಗಿರಿಜಾ(45), ಭಾಗ್ಯಮ್ಮ(32), ಅನಿಲ್(28) ಹಾಗೂ 8 ವರ್ಷದ ಬಾಲಕ ಈವನ್ ಮೃತ ದುರ್ದೈವಿಗಳು. ಗಾಯಗೊಂಡ ಲಾರಿ ಚಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!