ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚೆಡ್ಡಾ, ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಚಿತ್ರಕ್ಕೆ ಬಲಪಂಥೀಯ ವಿಚಾರಧಾರೆಯವರು ಬಾಯ್ ಕಟ್ ಹೇಳುವ ಮೂಲಕ ಬಿಟೌನ್ ನಟರಿಗೆ ದೊಡ್ಡ ಟೆನ್ಷನ್ ತಂದಿದೆ. ಮೊದಲೇ ಚಿತ್ರಗಳು ಸೋಲುತ್ತಿವೆ. ಒಂದೊಳ್ಳೆ ಸೂಪರ್ ಹಿಟ್ ಸಿನಿಮಾ ನೀಡಿ ಹಲವು ವರ್ಷಗಳೇ ಕಳೆದಿವೆ. ಇದರ ನಡುವೆ ಬಾಯ್ ಕಟ್ ಬೇರೆ. ಈಗ ಶಾರುಖ್ ನಟನೆಯ ಪಠಾಣ್ ಚಿತ್ರಕ್ಕೆ ಬಾಯ್ ಕಟ್ ಹೇಳಲಾಗುತ್ತಿದೆ.
ಯಾವ ಕಾರಣಕ್ಕೆ ಶಾರೂಖ್ ಚಿತ್ರಕ್ಕೆ ಬಾಯ್ ಕಟ್ ಹೇಳುತ್ತಿದ್ದಾರೆ ಗೊತ್ತಿಲ್ಲ. ಇದರ ಬಗ್ಗೆ ಸ್ಪಷಟನೆ ಇಲ್ಲ. ಧರ್ಮದ ಕಾರಣಕ್ಕೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಇದರ ಜೊತೆಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ನೋಡಿದ ನಂತರ, ಅದನ್ನು ಬೆಂಬಲಿಸಿ ಆ ಚಿತ್ರ ನೋಡಿ ಎಂದಿರುವ ನಟ ಹೃತಿಕ್ ರೋಷನ್ ಮುಂಬರುವ ವಿಕ್ರಮ್ ವೇದ್ ಚಿತ್ರವನ್ನು ಬಹಿಷ್ಕರಿಸುವಂತೆ ಅಭಿಯಾನ ನಡೆದಿದೆ.
ತಮಿಳಿನ ಸೂಪರ್ ಹಿಟ್ ವಿಕ್ರಮ್ ವೇದ್ ಮೂವಿಯನ್ನು ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಮಾಡಿದ್ದಾರೆ. ಈಗ ಈ ಚಿತ್ರಕ್ಕೂ ಬಹಿಷ್ಕಾರ ಎನ್ನುತ್ತಿದ್ದು, ಬಾಲಿವುಡ್ ಮಂದಿಯನ್ನು ಅಕ್ಷರಶಃ ಚಿಂತಿಗೀಡು ಮಾಡಿದೆ.