ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಪಾಲಿಕೆ ಮುಂದೆ ಕನ್ನಡ ಧ್ವಜ ಹಾರಿಸಿರುವುದನ್ನ ತೆರವುಗೊಳಿಸಿ, ಭಗವಾ ಧ್ವಜ ಹಾರಿಸುತ್ತೇವೆ ಎಂದು ಶಿವಸೇನೆ ಗಡಿಯಲ್ಲಿ ಕ್ಯಾತೆ ತೆಗೆದಿದೆ. ಎಂಇಎಸ್ ಪುಂಡರು ಸಹ ಇವರ ಜೊತೆ ಸೇರಿ ಮತ್ತೆ ತಮ್ಮ ಪುಂಡಾಟ ಮುಂದುವರೆಸಿದ್ದಾರೆ.
ಶಿವಸೇನೆ ಕಾರ್ಯಕರ್ತರ ಪುಂಡಾಟಕ್ಕೆ ಪೊಲೀಸರು ಗಡಿಯಲ್ಲಿ ಬ್ರೇಕ್ ಹಾಕಿದ್ದಾರೆ. ಇದ್ರಿಂದಾಗಿ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕನ್ನಡ ನೆಲದಲ್ಲಿ ಕನ್ನಡ ಧ್ವಜ ಹಾರಿಸಿದ್ರೆ ಎಂಇಎಸ್ ಹಾಗೂ ಶಿವಸೇನೆಗ್ಯಾಕೆ ಎಲ್ಲಿಲ್ಲದ ಸಂಕಟ ಎಂದು ಕನ್ನಡಿಗರು ಕಿಡಿ ಕಾರಿದ್ದಾರೆ.