ಪ್ರಜಾಸ್ತ್ರ ಸುದ್ದಿ
ಸಿಂದಗಿ: ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಇಂದು 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ನಾಡಿನಾದ್ಯಂತ ಇರುವ ಅವರ ಅಭಿಮಾನಿಗಳು ಅವರಿಗೆ ಶುಭ ಕೋರಿದ್ದಾರೆ. ಅಲ್ದೇ, ತಮ್ಮ ತಮ್ಮ ಊರುಗಳಲ್ಲಿ ಕಟೌಟ್ ನಿರ್ಮಿಸಿ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡಿದ್ದಾರೆ. ಅದೆ ರೀತಿ ಸಿಂದಗಿ ಪಟ್ಟಣದಲ್ಲಿಯೂ ಜನುಮ ದಿನ ಆಚರಿಸಲಾಗಿದೆ.
ಸಿಂದಗಿಯ ಹಾಲುಮತ ಗೆಳೆಯರ ಬಳಗದ ವತಿಯಿಂದ, ಗೋಲಗೇರಿ ರಸ್ತೆ ಹತ್ತಿರವಿರುವ ಕನಕದಾಸ ಸರ್ಕಲ್ ಹತ್ತಿರ ಸಿದ್ದರಾಮಯ್ಯನವರ ಹುಟ್ಟು ಹಬ್ಬವನ್ನ ಆಚರಿಸಿ ಶುಭ ಕೋರಿದ್ದಾರೆ.
ಈ ವೇಳೆ ಭೀಮಾಶಂಕರ ಪೂಜಾರಿ, ಬಸವರಾಜ ಮಣೂರ, ಯಲ್ಲು ಪೂಜಾರಿ, ದತ್ತು ಹೆಡಗಿ, ಗುರು ವರ್ಕನಳ್ಳಿ, ಕುಮಾರ ಹರವಾಳ, ಯೋಗೇಶ ಪೂಜಾರಿ, ಶಿವು ಹಿರೇಕುರಬರ, ರಾಜು ಹಿರೇಕುರಬರ, ಲಕಣ್ಣ ಬೀರಗೊಂಡ, ಸಿದ್ದು ದಡನೂರ, ವಿಕಾಸ ಬೀರಗೊಂಡ, ಬಾಗು ಬೀರಗೊಂಡ, ಬೀರು ಹರವಾಳ, ಶಯಪ್ಪ ಪೂಜಾರಿ, ಮುತ್ತಪ್ಪ ವಿಭೂತಹಳ್ಳಿ, ವಿ.ಟಿ ಹಿರೇಕುರಬರ, ಚಂದ್ರು ಉಪ್ಪಾರ, ಮಲ್ಲು ಹಿರೋಳ್ಳಿ, ಯಲ್ಲು ಬಂದಾಳ ಸೇರಿ ಅನೇಕರು ಭಾಗವಹಿಸಿದ್ರು.