ಪ್ರಜಾಸ್ತ್ರ ಸುದ್ದಿ
ಸಿಂದಗಿ: ಭೀಮಾ ನದಿ ತುಂಬಿದಾಗೆಲ್ಲ ಮುಳುಗಡೆಯಾಗುವ ಸಿಂದಗಿ ವಿಧಾನಸಭಾ ಕ್ಷೇತ್ರದ ಆಲಮೇಲ ತಾಲೂಕಿನ ತಾವರಖೇಡ ಗ್ರಾಮದಲ್ಲಿ ಆಗಸ್ಟ್ 25ರಂದು ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಹೇಳಿದರು.
ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ, ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ತಾವರಖೇಡ ಗ್ರಾಮದಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಇನ್ನು ಆಗಸ್ಟ್ 30ರಂದು ಜಾರಿಗೆ ಬರಲಿರುವ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರವನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ, ಪಟ್ಟಣದಲ್ಲಿ 5 ಕಡೆ ವ್ಯವಸ್ಥೆ ಮಾಡಲಾಗುವುದು ಎಂದರು.
ಶಾಸಕ ಅಶೋಕ ಮನಗೂಳಿ ಅವರು ಕೊಕಟನೂರ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವವರು. ಚುನಾವಣೆ ಸಂದರ್ಭದಲ್ಲಿ ನೀಡಿದ್ದ 5 ಗ್ಯಾರೆಂಟಿ ಯೋಜನೆಗಳ ಭರವಸೆನ್ನು ಈಡೇರಿಸುತ್ತಿದ್ದೇವೆ ಅಂತಾ ಹೇಳಿದರು. ಈ ವೇಳೆ ಮಂಜುನಾಥ ಬಿಜಾಪೂರ, ಡಾ.ಸಂಗಮೇಶ ಹೊಸಮನಿ, ಎಸ್.ಕೆ ಪೂಜಾರಿ, ರಾಜಶೇಖರ ಕೂಚಬಾಳ, ಬಸವರಾಜ ಯರನಾಳ, ಮುಸ್ತಾಕ್ ಮುಲ್ಲಾ, ಖಾದರ್ ಬಂಕಲಗಿ, ಶೌಕತ್ ಸುಂಬಡ, ಎಸ್.ಬಿ ಖಾನಾಪೂರ, ಸುನಂದಾ ಯಂಪೂರೆ, ಶಾಂತೂ ರಾಣಾಗೋಳ ಸೇರಿ ಇತರರು ಹಾಜರಿದ್ದರು.