ಪ್ರಜಾಸ್ತ್ರ ಸುದ್ದಿ
ವಿಜಯಪುರ: ಲಾಕ್ ಡೌನ್ ಮೇಲೆ ಲಾಕ್ ಡೌನ್ ಘೋಷಣೆ ಮಾಡ್ತಿದ್ರೂ ಸಿಂದಗಿ ಪಟ್ಟಣದಲ್ಲಿನ ಕೆಲ ಅಂಗಡಿಕಾರರಿಗೆ ಏನೂ ಅನಿಸ್ತಿಲ್ಲ. ಯಾಕಂದ್ರೆ ಲಾಕ್ ಡೌನ್ ನನ್ನೇ ಬಂಡವಾಳ ಮಾಡಿಕೊಂಡು ಹಣ ಗಳಿಕೆ ಮಾಡ್ತಿದ್ದಾರೆ. ಅದರಲ್ಲೂ ಸಿಂದಗಿ ಪಟ್ಟಣ ಪೂರ್ತಿ ಬಂದ್ ಆದ್ರೂ, ಇಲ್ಲಿನ ಕೆಲ ಗ್ಯಾರೇಜ್ ಅಂಗಡಿಗಳು ಮಾತ್ರ ಸದಾ ತೆರೆದಿರುತ್ತವೆ. ಇವರಿಗೆ ಲಾಕ್ ಡೌನ್ ಅನ್ನೋದು ಲೆಕ್ಕಕ್ಕೇ ಇಲ್ಲ.
ಚಿಮಣಿ ಬುಡದಲ್ಲಿ ಕತ್ತಲು ಅನ್ನೋ ಹಾಗೇ ತಹಶೀಲ್ದಾರ್ ಕಾಂಪೌಂಡ್ ಗೆ ಹೊಂದಿಕೊಂಡತೆ ಇರುವ ಕೆಲ ಗ್ಯಾರೇಜ್ ಅಂಗಡಿಗಳು ಸದಾ ತರೆದಿರುತ್ತವೆ. ಪೊಲೀಸ್ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಸದಾ ಅಂಗಡಿ ತೆರೆಯುತ್ತಾರೆ. ಪೊಲೀಸ್ ಸೈರನ್ ಕೇಳುತ್ತಿದ್ದಂತೆ ಅಂಗಡಿ ಮುಚ್ಚುತ್ತಾರೆ. ಅವರ ಗಾಡಿ ಹೋಗ್ತಿದ್ದಂತೆ ಮತ್ತೆ ಅದೆ ರಾಗ ಅದೆ ಹಾಡು. ಈ ಬಗ್ಗೆ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೂ ಇಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇಂತಹ ಕಳ್ಳಾಟಕ್ಕೆ ಇನ್ಮುಂದೆ ಆದರೂ ಅಧಿಕಾರಿಗಳು ಬ್ರೇಕ್ ಹಾಕಬೇಕು. ಇದು ಎಲ್ಲರ ಜೀವ ಹಾಗೂ ಜೀವನದ ಪ್ರಶ್ನೆಯಾಗಿದೆ.