ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು: ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ 15 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದರಲ್ಲಿ 8 ಜನರನ್ನ ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ. ಈಗಾಗ್ಲೇ ಸಿಪಿಐ ವರ್ಗಾವಣೆ ಬೆನ್ನಲ್ಲೇ ಪಿಎಸ್ಐ ಅನ್ನು ಸಹ ವರ್ಗಾವಣೆ ಮಾಡಲಾಗಿದೆ.
ಶೃಂಗೇರಿ ಠಾಣೆ ಪಿಎಸ್ಐ ಕೀರ್ತಿಕುಮಾರರನ್ನ ವರ್ಗಾವಣೆ ಮಾಡಲಾಗಿದೆ. ಉತ್ತರ ಕನ್ನಡದ ಕುಮಟಾ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಶುಕ್ರವಾರವಷ್ಟೇ ಸಿಪಿಐ ಸಿದ್ದರಾಮಯ್ಯರನ್ನ ಕರ್ತವ್ಯಲೋಪದ ಆಧಾರದ ಮೇಲೆ ಅಮಾನತುಗೊಳಿಸಿ ಆದೇಶಿಸಲಾಗಿತ್ತು.
ಈಗಾಗ್ಲೇ ಈ ಬಗ್ಗೆ ತನಿಖೆ ನಡೆದಿದ್ದು ಉಳಿದ ಆರೋಪಿಗಳ ಬಂಧನಕ್ಕೆ ಕೆಲ ಪೊಲೀಸರು ಹಿಂದೇಟು ಹಾಕಿದ ಪರಿಣಾಮ, ಎಎಸ್ಪಿ ಶ್ರುತಿ ಅವರ ನೇತೃತ್ವದಲ್ಲಿ ಹೊಸ ತಂಡ ತನಿಖೆಯನ್ನ ನಡೆಸುತ್ತಿದೆ.