ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹಿಂದಿ ಹೇರಿಕೆ ವಿರೋಧಿಸಿ ರಾಜ್ಯಾದ್ಯಂತ ಮಂಗಳವಾರ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಎಂದು ಆಚರಣೆ ಮಾಡಲಾಗುತ್ತಿದೆ. ಇದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರಾಳ ದಿನ ಆಚರಣೆ ಮಾಡಲಾಗಿದೆ.
ವಾಟಾಳ್ ನಾಗರಾಜ್, ಸಾ.ರಾ ಗೋವಿಂದ್, ಭೈರಪ್ಪ ಹರೀಶ್ ಕುಮಾರ್, ನಟರಾದ ಚೇತನ್ ಅಹಿಂಸಾ, ಡಾಲಿ ಧನಂಜಯ್, ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಆರ್ ಶ್ರೀನಿವಾಸ್, ಜೆಡಿಎಸ್ ಪಕ್ಷದ ವತಿಯಿಂದ ಸೇರಿದಂತೆ ಕರ್ನಾಟಕದಲ್ಲೆಡೆ ಹಿಂದಿ ಹೇರಿಕೆ ನಿಲ್ಲಿಸಿ ಎಂದು ಕೂಗು ದೊಡ್ಡಮಟ್ಟದಲ್ಲಿ ಏಳುವ ಮೂಲಕ ಹಿಂದಿ ದಿನವನ್ನು ವಿರೋಧಿಸಲಾಗಿದೆ.