ಮನೆ ಮೇಲ್ಛಾವಣಿ ಹಾರಿ ಸಿಂದಗಿಯಲ್ಲಿ ಮಗು ಸಾವು

328

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿರುಗಾಳಿ, ಮಳೆ ಕಾಣಿಸಿಕೊಳ್ಳುತ್ತಿದೆ. ಇದೆ ರೀತಿ ಮಂಗಳವಾರ ಸಂಜೆ ತಾಲೂಕಿನ ಸುರಗಿಹಳ್ಳಿ ಬೀಸಿದ ಬಿರುಗಾಳಿಯಿಂದಾಗಿ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಇದರ ಪರಿಣಾಮ 5 ತಿಂಗಳ ಮಗು ಸಾವನ್ನಪ್ಪಿದೆ.

ಮೇಲ್ಛಾವಣಿಯ ಕಂಬಕ್ಕೆ ಕಟ್ಟಿದ ಜೋಳಿಗೆಯ ಸಮೇತ ಹಾರಿ ಹೋಗಿ ವಿದ್ಯುತ್ ಕಂಬಕ್ಕೆ ಬಡಿದಿದೆ. ಹೀಗಾಗಿ ಜೋಳಿಗೆಯಲ್ಲಿದ್ದ 5 ತಿಂಗಳ ಮಗು ಮೃತಪಟ್ಟಿದೆ. ಅಬ್ದುಲ್ ರೆಹಮಾನ್ ಕಸಾಬ ಹಾಗೂ ತಬಸುಮ್ ಅನ್ನೋ ದಂಪತಿಯ ಮಗು ಸಾವನ್ನಪ್ಪಿದೆ.




Leave a Reply

Your email address will not be published. Required fields are marked *

error: Content is protected !!