ಪ್ರಜಾಸ್ತ್ರ ಸುದ್ದಿ
ಚಡಚಣ: ಭೀಮಾ ನದಿಗೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಬಿದ್ದಿರುವ ಘಟನೆ ತಾಲೂಕಿನ ಉಮರಾಣಿ ಗ್ರಾಮದ ಲವಗಿ ಬಳಿ ನಡೆದಿದೆ. ಚಾಲಕ ಹಾಗೂ ಟ್ರ್ಯಾಕ್ಟರ್ ನಲ್ಲಿದ್ದವರು ಈಜಿ ದಡ ಸೇರಿದ್ದಾರೆ.
ಸಕ್ಕರೆ ಕಾರ್ಖಾನೆಗಳಿಗೆ ಕಬ್ಬನ್ನ ಇದೆ ಮಾರ್ಗವಾಗಿ ಸಾಗಿಸಿಕೊಂಡು ಬರಲಾಗ್ತಿದೆ. ತಡೆಗೋಡೆ ಇಲ್ಲದ ಸೇತುವೆ ಮೇಲೆ ಟ್ಯಾಕ್ಟರ್ ಚಲಿಸ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಭೀಮಾ ನದಿಗೆ ಬಿದ್ದಿದೆ. ಇನ್ನು ಊರಿನ ಜನರು ಸೇರಿಕೊಂಡು ಕಬ್ಬು ಹಾಗೂ ಟ್ಯಾಕ್ಟರ್ ತೆಗೆಯಲು ಸಹಾಯ ಮಾಡ್ತಿದ್ದಾರೆ.