ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ದೇಶದ ಸ್ವತಂತ್ರಕ್ಕಾಗಿ ಕ್ರಾಂತಿಕಾರಿ ಹೋರಾಟ ಮಾಡಿ ಪ್ರಾಣವನ್ನ ಅರ್ಪಿಸಿದ ಶಿವರಾಮ ರಾಜಗುರು ಅವರ ಜಯಂತಿಯಂದು ದೇಶದ ಗಣ್ಯರೆಲ್ಲ ಶುಭ ಕೋರಿದ್ದಾರೆ. ಆಗಸ್ಟ್ 24, 1908ರಲ್ಲಿ ಜನಿಸಿದ ರಾಜಗುರು ಮಾರ್ಚ್ 23, 1931ರಲ್ಲಿ ನೇಣುಕಂಬಕ್ಕೆ ತನ್ನ ಕುತ್ತಿಗೆಯನ್ನ ನೀಡಿದ್ರು. ಆಗ ಅವರ ವಯಸ್ಸು ಕೇವಲ 23 ಆಗಿತ್ತು.
ಭಗತ್ ಸಿಂಗ್, ಸುಖದೇವರ ಜೊತೆಗೆ ಈ ನಾಡಿಗಾಗಿ ಪ್ರಾಣ ಅರ್ಪಿಸಿದ ವೀರ ಹೋರಾಟಗಾರನಿಗೆ ಕಾಂಗ್ರೆಸ್, ಬಿಜೆಪಿ ನಾಯಕರು ಸೇರಿದಂತೆ ಪ್ರತಿಯೊಬ್ಬರು ಟ್ವೀಟರ್, ಫೇಸ್ ಬುಕ್ ಸೇರಿ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ.