ಪ್ರಜಾಸ್ತ್ರ ಅಪರಾಧ ಸುದ್ದಿ
ಹುಬ್ಬಳ್ಳಿ: ಗಂಡ ಹೆಂಡ್ತಿ ನಡುವಿನ ಜಗಳದಲ್ಲಿ ಕೊನೆಗೆ ಪತಿಯ ಹತ್ಯೆಯೊಂದಿಗೆ ಕೊನೆಗೊಂಡಿದೆ. ಇಲ್ಲಿನ ತಾರಿಹಾಳ ರಾಮನಗರದಲ್ಲಿ ಈ ಘಟನೆ ನಡೆದಿದೆ. 40 ವರ್ಷದ ವಿರೂಪಾಕ್ಷ ಭಜಂತ್ರಿ ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ಕಳೆದ ಆಗಸ್ಟ್ 20ರಂದು ಮಗನಿಗೆ ಹೊಡೆಯಬೇಡವೆಂದು ಪತ್ನಿಗೆ ಪತಿ ಬುದ್ದಿಮಾತು ಹೇಳಿದ್ದಾನೆ. ಇದು ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಿದೆ. ಬಳಿಕ ಸಂಬಂಧಕರೊಂದಿಗೆ ಸೇರಿಕೊಂಡ ಪತ್ನಿ ಗಂಭೀರವಾಗಿ ಹಲ್ಲೆ ಮಾಡಿದ್ದಾಳೆ. ಇದನ್ನ ತಡೆಯಲು ಬಂದ ಅತ್ತೆಯ ಮೇಲೂ ಹಲ್ಲೆ ಮಾಡಲಾಗಿದೆ.
ಗಂಭೀರವಾಗಿ ಹಲ್ಲೆಗೊಳಗಾದ ವಿರೂಪಾಕ್ಷನನ್ನ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾನೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಓರ್ವನನ್ನ ಬಂಧಿಸಿದ್ದು, ಮೃತನ ಪತ್ನಿ ಹಾಗೂ ಸಂಬಂಧಿಕರು ತಲೆ ಮರೆಸಿಕೊಂಡಿದ್ದಾರೆ.