ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಬಯಲಾಗ್ತಿದ್ದಂತೆ ಉಳಿದ ಸಚಿವರು ಅಲರ್ಟ್ ಆಗಿದ್ದು ಕೋರ್ಟ್ ಮೊರೆ ಹೋಗ್ತಿದ್ದಾರೆ. ಶುಕ್ರವಾರ 6 ಜನ ಸಚಿವರು, ತಮ್ಮ ವಿರುದ್ಧ ಯಾವುದೇ ಮಾನಹಾನಿ, ಅವಹೇಳನಕಾರಿ ಸುದ್ದಿ ಪ್ರಸಾರವಾಗದಂತೆ ಅರ್ಜಿ ಸಲ್ಲಿಸಿದ್ರು. ಶನಿವಾರ ಮತ್ತೆ 6 ಜನ ಸಚಿವರ ಅರ್ಜಿ ಸಲ್ಲಿಸಿದ್ದಾರೆ.
ಈ ಬಗ್ಗೆ ಮಾತ್ನಾಡಿರುವ ಸಚಿವ ಎಸ್.ಟಿ ಸೋಮಶೇಖರ, ಶನಿವಾರ 6 ಜನ ಸಚಿವರು ಅರ್ಜಿ ಸಲ್ಲಿಸಿದ್ದಾರೆ. ಯಾರದೋ ರಾಜಕೀಯ ಷಡ್ಯಂತ್ರಕ್ಕೆ ನಾವು ಟಾರ್ಗೆಟ್ ಆಗಬಾರದು ಅನ್ನೋ ಕಾರಣಕ್ಕೆ ಕೋರ್ಟ್ ಮೊರೆ ಹೀಗಿದ್ದೇವೆ ಎಂದಿದ್ದಾರೆ.
ಇನ್ನು ಎರಡ್ಮೂರು ದಿನಗಳಲ್ಲಿ 15 ಜನ ಸಚಿವರು ಜಂಟಿಯಾಗಿ ಸುದ್ದಿಗೋಷ್ಟಿ ನಡೆಸುತ್ತೇವೆ. ಮುಂಬೈನಲ್ಲಿ ಏನು ಮಾಡಿದೇವು. ಏನು ನಡೆಯಿತು ಅನ್ನೋದನ್ನ ಜನರಿಗೆ ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ.