ಪ್ರಜಾಸ್ತ್ರ ಸುದ್ದಿ
ಬೆಳ್ತಂಗಡಿ: ಕಳೆದ ಏಪ್ರಿಲ್ 19ರಂದು ತಾಲೂಕಿನ ಗುರಿಪಳ್ಳ ಗ್ರಾಮದಲ್ಲಿ ಬುಡುಕಟ್ಟು ಸಮುದಾಯದ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣ ಸಂಬಂಧ, 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಗುಂಪೊಂದು ಮಹಿಳೆಯ ಬಟ್ಟೆ ಹರಿದು ಹಲ್ಲೆ ಮಾಡಿದೆ. ಇದರ ಜೊತೆಗೆ ಅವರ ತಾಯಿ ಹಾಗೂ ಅಕ್ಕನ ಮೇಲೂ ಹಲ್ಲೆ ಮಾಡಿದೆ. ಇದರ ವಿಡಿಯೋವನ್ನು ಮಾಡಿಕೊಂಡಿದ್ದರು. ಇದೀಗ ಸಂತೋಷ್, ಸಂದೀಪ್, ಗುಲಾಬಿ, ಕುಸುಮಾ, ಸುಗುಣ, ಲಲಿತಾ, ಅನಿಲ್, ಲೋಕಯ್ಯ ಹಾಗೂ ಚನ್ನಕೇಶವ್ ಅನ್ನೋ 9 ಮಂದಿ ವಿರುದ್ಧ ಪ್ರರಣ ದಾಖಲಾಗಿದೆ.
ಈ ಅಮಾನವೀಯ ಕೃತ್ಯ ಬಿಜೆಪಿ ಮುಖಂಡನ ನೇತೃತ್ವದಲ್ಲಿಯೇ ನಡೆದಿದೆ ಎಂದು ದಲಿತಪರ ಸಂಘಟನೆ ಮುಖಂಡರು ಆರೋಪಿಸಿದ್ದಾರೆ.