ಆದೇಶವಿಲ್ಲದೆ ನನ್ನ ಬಂಧನ: ಮೋದಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

290

ಪ್ರಜಾಸ್ತ್ರ ಸುದ್ದಿ

ಲಕ್ನೋ: ಉತ್ತರಪ್ರದೇಶದ ಲಂಖಿಪುರ್ ದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೈತರನ್ನು ಸಂತೈಸಲು ಹೋದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಬಂಧಿಸಿ ಗೃಹ ಬಂಧನದಲ್ಲಿ ಇಡಲಾಗಿದೆ. ಈ ಬಗ್ಗೆ ಪ್ರಶ್ನಿಸಿರುವ ಪ್ರಿಯಾಂಕಾ, ಯಾವುದೇ ಆದೇಶವಿಲ್ಲದೆ, ಎಫ್ಐಆರ್ ಇಲ್ಲದೆ 28 ಗಂಟೆಗಳಿಂದ ನನ್ನನ್ನು ಬಂಧಿಸಲಾಗಿದೆ. ಅನ್ನದಾತರ ಸಾವಿಗೆ ಕಾರಣನಾದವನನ್ನು ಯಾಕೆ ಬಂಧಿಸಿಲ್ಲವೆಂದು ಪ್ರಧಾನಿ ಮೋದಿಗೆ ಕೇಳಿದ್ದಾರೆ.

ರೈತರ ಮೇಲೆ ಎಸ್ ಯುವಿ ಕಾರನ್ನು ಹತ್ತಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅದನ್ನು ಟ್ವೀಟರ್ ಮೂಲಕ ಪ್ರಧಾನಿ ಮೋದಿಗೆ ತೋರಿಸಿದ್ದು, ಇದನ್ನು ನೋಡಿದ್ದೀರಾ ಎಂದು ಕೇಳಿದ್ದಾರೆ. ಅಲ್ದೇ, ನಿಮ್ಮ ಸರ್ಕಾರ ಯಾವುದೇ ಆದೇಶವಿಲ್ಲದೆ ನನ್ನನ್ನು ಕಷ್ಟಡಿಯಲ್ಲಿಟ್ಟಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!