ಪ್ರಜಾಸ್ತ್ರ ಸುದ್ದಿ
ಹೊರನಾಡು: ಭದ್ರಾ ನದಿಯ ತೀರದಲ್ಲಿ ವಾಮಾಚಾರ ನಡೆಸಿರುವುದು ಕಂಡು ಬಂದಿದೆ. ಇದನ್ನು ನೋಡಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೆಲ ದಿನಗಳಿಂದ ಇಲ್ಲಿ ವಾಮಾಚಾರ ಮಾಡಲಾಗುತ್ತಿದೆ ಅನ್ನೋ ಅನುಮಾನ ಮೂಡಿತ್ತು. ಇಂದು ಮುಂಜಾನೆ ಇದಕ್ಕೆ ಉತ್ತರ ಸಿಕ್ಕಿದೆ.
ನದಿಯ ದಡದಲ್ಲಿ ಮಣ್ಣಿನ ಗೊಂಬೆಗಳು, ಬಟ್ಟೆ, ಕೂದಲು, ಉಗುರು, ಕುಂಕುಮ, ಅರಿಶಿಣ ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ನದಿಯಲ್ಲಿ ನಾಲ್ಕು ಕುರಿಗಳು ತಲೆಗಳು ತೇಲಿ ಬಂದಿವೆ. ನರಬಲಿ ಏನಾದರೂ ನಡೆದಿದ್ಯಾ ಅನ್ನೋ ಶಂಕೆ ಮೂಡಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ.