ಸೂಲಿಬೆಲೆ ವಿರುದ್ಧ ‘ಸೋಷಿಯಲ್ ವಾರ್’

490

ಹೈದ್ರಾಬಾದ್: ಪಶುವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆಗೆ ಸಂಬಂಧಿಸಿದಂತೆ ಯುವ ಬ್ರಿಗೇಡ್ ಸಂಘಟನೆಯ ಚಕ್ರವರ್ತ ಸೂಲಿಬೆಲೆ ಮಾಡಿರುವ ಟ್ವೀಟ್ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯೆ ಯುವತಿಯ ಅತ್ಯಾಚಾರ ಹಾಗೂ ಕೊಲೆಯ ಹಿಂದೆ ನಾಲ್ವರು ಕಾಮಪಿಶಾಚಿಗಳಿದ್ದಾರೆ. ಆದ್ರೆ, ಸೂಲಿಬೆಲೆ ಅವರು ಮಹಮ್ಮದ ಅನ್ನೋ ಆರೋಪಿ ಫೋಟೋ ಹಾಕಿ ಗಲ್ಲು ಶಿಕ್ಷೆ ನೀಡಬೇಕೆಂದು ಬರೆದಿದ್ದಾರೆ.

ಮಹಮ್ಮದ ಜೊತೆ ನವೀನ, ಶಿವು ಹಾಗೂ ಕೇಶವುಲು ಅನ್ನೋ ಆರೋಪಿಗಳು ಸಹ ಇದ್ದಾರೆ. ಅವರನ್ನ ಬಿಟ್ಟು ಕೇವಲ ಮಹಮ್ಮದ ಅನ್ನೋ ಆರೋಪಿ ಹೇಳುವ ಮೂಲಕ ತಮ್ಮ ವಿಕೃತ ಮನಸ್ಥಿತಿಯನ್ನ ತೋರಿಸಿದ್ದಾರೆ ಅಂತಾ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಪ್ರಕರಣದ ಎಲ್ಲ ಆರೋಪಿಗಳನ್ನ ಗಲ್ಲಿಗೇರಿಸಿ ಅನ್ನೋ ಬದಲು ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವ ನಿನ್ನ ನಕಲಿ ದೇಶ ಪ್ರೇಮ, ನಕಲಿ ಹಿಂದುತ್ವ ಎದ್ದು ಕಾಣುತ್ತೆ. ಯಾಕೆ, ಆ ಮೂವರು ನಿನ್ನ ತಮ್ಮಂದಿರಾ.. ಲೋ ವಿಷಜಂತು.. ಹೀಗೆ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ.

ಬೇರೆಯವರಿಗೆ ಬುದ್ದಿವಾದ ಹೇಳುವ. ಸಮಾಜ ಸುಧಾರಕ ಅಂತಾ ಕರೆಸಿಕೊಳ್ಳುವ ವ್ಯಕ್ತಿಗಳು ಈ ರೀತಿ ನಡೆದುಕೊಳ್ತಿರುವುದು ನಿಜಕ್ಕೂ ದೊಡ್ಡ ದುರಂತ. ಇಡೀ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಕಾಮುಕರ ಅಟ್ಟಹಾಸಕ್ಕೆ ಜೀವವೊಂದು ಹೋಗಿದೆ. ಆಕೆಯ ಕುಟುಂಬ ಕಣ್ಣೀರು ಕೋಡಿ ಹರಿಸ್ತಿದೆ. ನೀಚ ಕೆಲಸ ಮಾಡಿದ ಎಲ್ಲರಿಗೂ ಶಿಕ್ಷೆ ಕೊಡಿ ಅಂತಾ ಹೇಳುವ ಬದ್ಲು ಧರ್ಮದ ಆಧಾರದ ಮೇಲೆ ಮಾತ್ನಾಡುವ ಇಂಥಾ ಜನರಿಂದ ಇಂಥಾ ಘಟನೆಗಳು ಹೆಚ್ಚಾಗ್ತಿವೆ ಅನ್ನೋದು ಮಾತ್ರ ಸುಳ್ಳಲ್ಲ.




Leave a Reply

Your email address will not be published. Required fields are marked *

error: Content is protected !!