ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ವಿಜಯ ಹಜಾರೆ ಫೈನಲ್ ಪಂದ್ಯದಲ್ಲಿ ಕರ್ನಾಟಕ ಟ್ರೂಫಿ ಎತ್ತಿಹಿಡಿಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ಆರಂಭದಲ್ಲಿ ಮುರುಳಿ ವಿಜಯ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಇಡಾಯ್ತ.
ಮೂರನೇ ವಿಕೆಟ್ ಗೆ ಮೈದಾನಕ್ಕೆ ಇಳಿದ ಸ್ಪೀನ್ ಬೌಲರ್ ರವಿಚಂದ್ರನ್ ಅಶ್ವಿನ್ ಮಾಡಿದ ಯಡವಟ್ಟು ಕೆಲಸಕ್ಕೆ ಬಿಸಿಸಿಐ ಗರಂ ಆಗಿದೆ. ಅಷ್ಟಕ್ಕೂ ಅಶ್ವಿನ್ ಮಾಡಿದ್ದೇನು ಅಂತೀರಾ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಅಶ್ವಿನ್ ಬಿಸಿಸಿಐ ಲೋಗೋ ಇರುವ ಹೆಲ್ಮೆಟ್ ಹಾಕಿಕೊಂಡಿದ್ರು. ಈ ಮೂಲಕ ನಿಯಮ ಉಲ್ಲಂಘಿಸಿದ ತಪ್ಪಿಗೆ ದಂಡ ವಿಧಿಸಲಾಗಿದೆ.
ಮ್ಯಾಚ್ ರೆಪ್ರಿ ಚಿನ್ಮಯ ಶರ್ಮಾ ಅಶ್ವಿನ್ ಗೆ ದಂಡ ವಿಧಿಸಿದ್ದಾರೆ. ಅದು ಅಲ್ಲದೇ ಬಿಸಿಸಿಐ ಕಠಿಣ ಕ್ರಮಕ್ಕೆ ಮುಂದಾಗುವ ಸಾಧ್ಯತೆಯಿದೆ ಅಂತಾ ಹೇಳಲಾಗ್ತಿದೆ. ಬಿಸಿಸಿಐ ಅಧ್ಯಕ್ಷರಾಗಿ ಸೌರವ ಗಂಗೂಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಅದೇನು ಕ್ರಮ ತೆಗೆದುಕೊಳ್ತಾರೋ ನೋಡಬೇಕು.