ಪ್ರಜಾಸ್ತ್ರ ಸುದ್ದಿ
ಗದಗ: ಬಿಜೆಪಿ ನಾಯಕರಾದ ಸಚಿವ ಮುರುಗೇಶ್ ನಿರಾಣಿ ಹಾಗೂ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡುವಿನ ಜಗಳ ಹಾದಿ ರಂಪಾ ಬೀದಿ ರಂಪಾ ಆಗುತ್ತಿದೆ. ಈ ಇಬ್ಬರು ನಾಯಕರು ಬಾಯಿಗೆ ಬಂದಂತೆ ಬೈದಾಡಿಕೊಳ್ಳುತ್ತಿದ್ದು, ಈ ಬಗ್ಗೆ ಕಾಂಗ್ರೆಸ್ ಮಾಜಿ ಸಚಿವ, ಶಾಸಕ ಎಚ್.ಕೆ ಪಾಟೀಲ ಪ್ರತಿಕ್ರಿಯೆ ನೀಡಿದ್ದು ಇವರ ಜಗಳ ಸಮಾಜ ತಲೆ ತಗ್ಗಿಸುವಂತಿದೆ ಎಂದಿದ್ದಾರೆ.
ಜನಪ್ರತಿನಿಧಿಗಳಾದ ಇವರು ಜನರು ಸಹನೆ ಕಳೆದುಕೊಳ್ಳುವಂತೆ ಮಾತನಾಡುತ್ತಿದ್ದೀರಿ. ಕರ್ನಾಟಕದ ರಾಜಕೀಯ ವ್ಯವಸ್ಥೆಯನ್ನು ಹೊಲಸು ಮಾಡುತ್ತಿದ್ದೀರಿ. ಸಿಎಂ ಸೇರಿದಂತೆ ಸಚಿವರು ಸಾರ್ವಜನಿಕರ ಕ್ಷಮೆ ಕೇಳಬೇಕು. ರಾಜಕೀಯ ಬಡೆದಾಟದಲ್ಲಿ ಎಲ್ಲರನ್ನೂ ಅವಮಾನಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.