ಪ್ರಜಾಸ್ತ್ರ ಸುದ್ದಿ
ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಬಿಜೆಪಿ ಮೈತ್ರಿಕೂಟ ಪಡೆಗೆ ಭಾರಿ ಮುಖಭಂಗವಾಗಿದೆ. ಈ ಮೂಲಕ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ ಶಾ ಜೋಡಿಗೆ ಸೋಲಿನ ಕಹಿ ಅನುಭವ ಶುರುವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 3ನೇ ಬಾರಿಗೆ ಅಧಿಕಾರ ನಡೆಸುವುದು ಸ್ಪಷ್ಟವಾಗಿದೆ. ದೀದಿ ಸ್ಪರ್ಧಿಸಿರುವ ನಂದಿಗ್ರಾಮದಲ್ಲಿ ಸುವೇಂದ್ರ ಅಧಿಕಾರ ವಿರುದ್ಧ ಅವರಿಗೆ ಹಿನ್ನಡೆಯಾಗಿದ್ದು, ಒಂದಿಷ್ಟು ಆತಂಕ ಮೂಡಿಸಿದೆ.
ಇನ್ನು ತಮಿಳುನಾಡಿನಲ್ಲಿ ಸೂರ್ಯೋದಯ ಚಿಹ್ನೆ ಹೊಂದಿರುವ ಡಿಎಂಕ ದಶಕಗಳ ಬಳಿಕ ಚುಕ್ಕಾಣಿ ಹಿಡಿಯುತ್ತಿದೆ. ಎಐಡಿಎಂಕೆ ಜೊತೆಗೆ ಹೋದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಹೀಗಾಗಿ ಸ್ಟಾಲಿನ್ ಸಿಎಂ ಆಗೋದು ಪಕ್ಕಾ ಆಗಿದೆ.
ಇನ್ನು ಕೇರಳದಲ್ಲಿ ಡಿಎಲ್ಎಫ್ ಸ್ಪಷ್ಟವಾದ ಬಹುಮತ ಸಾಧಿಸುವತ್ತ ಮುನ್ನಡೆ ಸಾಧಿಸಿದೆ. ಮೂಲಕ ದೇವರ ನೆಲದಲ್ಲಿಯೂ ಕಮಲ ನಾಯಕರಿಗೆ ತೀವ್ರ ಹಿನ್ನಡೆಯಾಗಿದೆ. ಆಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವ ಸಾಧ್ಯತೆ ಹೆಚ್ಚಿದೆ. ಇನ್ನು ಪುದುಚೇರಿಯಲ್ಲಿ ಎನ್ ಡಿಎಗೆ ಗಲುವು ಸ್ಪಷ್ಟವಾಗಿದೆ. ದೊಡ್ಡ ರಾಜ್ಯಗಳಲ್ಲಿ ಸೋಲುವುದು ಪಕ್ಕಾ ಆಗಿದ್ದು, ಸಣ್ಣ ರಾಜ್ಯಗಳಲ್ಲಿ ಕಮಲ ಅಧಿಕಾರಕ್ಕೆ ಬರ್ತಿದೆ.