ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ: ಸಿಂದಗಿಯಿಂದ ವಿಜಯಪುರಕ್ಕೆ ಹೋಗುವಾಗ ದೇವರಹಿಪ್ಪರಗಿ ಹತ್ತಿರ ಬೈಕ್ ವೊಂದು ಅಪಘಾತಗೊಂಡಿದೆ. ಇದ್ರಿಂದಾಗಿ ಓರ್ವ ಸವಾರ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಾಯಗಳಾಗಿವೆ.
ಮೃತನನ್ನ ಗುತ್ತರಗಿಯ 28 ವರ್ಷದ ಯುವಕ ಜಗದೀಶ ಹೊಸಮನಿ ಎಂದು ಹೇಳಲಾಗ್ತಿದೆ. ಇನ್ನೊಬ್ಬ ಸವಾರ ಸಿಂದಗಿಯ 27 ವರ್ಷದ ಸಾಗರ ನಾಯಕನಿಗೆ ಗಾಯಗಳಾಗಿದ್ದು, ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಗುರುವಾರ ಮಧ್ಯರಾತ್ರಿ ಈ ಒಂದು ಅಪಘಾತ ಸಂಭವಿಸಿದ್ದು, ಹೇಗೆ ಆಗಿದೆ ಅನ್ನೋದರ ಮಾಹಿತಿ ತಿಳಿದು ಬಂದಿಲ್ಲ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.