ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದಾಗಿ ಚಿತ್ರರಂಗ ಸಂಪೂರ್ಣ ಬಂದ್ ಆಗಿ, ಸಾಕಷ್ಟು ನಷ್ಟವಾಗಿದೆ. ಈ ಸಂಬಂಧ ಪರಿಹಾರ ನೀಡಬೇಕು ಎಂದು ಸಿಎಂ ಬಿಎಸ್ವೈ ಅವರನ್ನ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅವರು ಭೇಟಿಯಾಗಿ ಮಾತ್ನಾಡಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತ್ನಾಡಿದ ಶಿವಣ್ಣ, ಎಷ್ಟು ನಷ್ಟವಾಗಿದೆ ಎಂದು ಅಂದಾಜು ಮಾಡಿ ಹೇಳಲು ನಾನು ಬ್ಯುಸಿನೆಸ್ ಮೆನ್ ಅಲ್ಲ. ನಾನೊಬ್ಬ ನಟ ಅಷ್ಟೇ ಎಂದು ಹೇಳಿದ್ದಾರೆ. ಆದ್ರೆ, ಎಷ್ಟು ನಷ್ಟವಾಗಿದೆ ಅನ್ನೋದರ ಅಂದಾಜು ಲೆಕ್ಕ ಇಲ್ಲದೆ ಹೋದ್ರೆ ಪರಿಹಾರ ಕೊಡುವುದಾದ್ರು ಹೇಗೆ ಅನ್ನೋ ಪ್ರಶ್ನೆ ಮೂಡಿದೆ.
ಇನ್ನು ಥಿಯೇಟರ್ ತೆರೆಯುವ ಬಗ್ಗೆ ಮಾತ್ನಾಡಿದ್ದು, ಕೇಂದ್ರದ ಮಾರ್ಗಸೂಚಿಯಂತೆ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ರು. ಈ ವೇಳೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ರು.