ಅಭಿಮಾನಿಗೆ ಹ್ಯಾಟ್ರಿಕ್ ಹೀರೋ ನುಡಿ ನಮನ

392

ಬೆಂಗಳೂರು: ನಟ ಶಿವರಾಜಕುಮಾರ ಅಪ್ಪಟ ಅಭಿಮಾನಿ 27 ವರ್ಷದ ಕಶ್ಯಪ ಸಿಂಹ ಹೃದಯಾಘಾತದಿಂದ ನಿನ್ನೆ ನಿಧನರಾಗಿದ್ದಾರೆ. ಬೆಂಗಳೂರಿನ ಶ್ರೀನಗರದ ನಿವಾಸದಲ್ಲಿ ಶಿವಣ್ಣ ಅಭಿಮಾನಿ ಕೊನೆಯುಸಿರೆಳೆದಿದ್ದಾರೆ.

ಅಪ್ಪಟ ಅಭಿಮಾನಿಯನ್ನ ಕಳೆದುಕೊಂಡಿರುವ ನಟ ಶಿವರಾಜಕುಮಾರ ಅವರು, ಸಂತಾಪ ಸೂಚಿಸಿದ್ದಾರೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಅಭಿಮಾನಿಯನ್ನ ಕಳೆದುಕೊಂಡವರ ನೋವು ಅವರಿಗೆ ಮಾತ್ರ ಗೊತ್ತು. ನೀವು ನನಗೆ ತೋರಿಸಿದ ಪ್ರೀತಿ, ಸಿನಿಮಾ ನೋಡಿ ಹೊಗಳುತ್ತಿದ್ದ ರೀತಿ ಮರೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ನೀನು ಯಾವಾಗ್ಲೂ ನನ್ನ ಹೃದಯದಲ್ಲಿ ಇರ್ತಿಯಾ. ಮಿಸ್ ಯೂ ಅಂತಾ ಹೇಳಿದ್ದಾರೆ. ಕಶ್ಯಪ ಸಿಂಹ ಟಿವಿಎಸ್ ಮೋಟಾರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು. ಶಿವಣ್ಣನ ಅಭಿಮಾನಿಯಾಗಿದ್ದ ಅವರು, ಶಿವಸೈನ್ಯ ಅನ್ನೋ ಅಭಿಮಾನಿ ಬಳಗ ಕಟ್ಟಿ, ಅವರ ಪ್ರತಿಯೊಂದು ಸಿನಿಮಾಗಳ ರಿಲೀಸ್ ಟೈಂಲ್ಲಿ ಸಂಭ್ರಮಾಚರಣೆ ಮಾಡ್ತಿದ್ರು. ರುಸ್ತುಂ ಸಿನಿಮಾ ವೇಳೆ ಸಹ ಸಂಭ್ರಮಾಚರಣೆ ಮಾಡಿದ್ರು. ಆದ್ರೆ, ಇದೀಗ ಅವರೇ ಇಲ್ಲ.




Leave a Reply

Your email address will not be published. Required fields are marked *

error: Content is protected !!