ಪ್ರಜಾಸ್ತ್ರ ಸುದ್ದಿ
ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವೆ ಜಟಾಪಟಿ ನಡೆದಿದೆ. ಹೀಗಾಗಿ ಪಾಲಿ ಹಿಲ್ ಪ್ರದೇಶದಲ್ಲಿರುವ ಕಂಗನಾಳ, ಮಣಿಕರ್ಣಿಕಾ ಫಿಲ್ಮ್ ಕಚೇರಿಯನ್ನ ಬಿಎಂಸಿ ನೆಲಸಮ ಮಾಡಿದೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
ಮುಂಬೈಯನ್ನ ಪಾಕ್ ಆಕ್ರಮಿತ ಕಾಶ್ಮೀರ ಎಂದು ಕಂಗನಾ ಹೇಳಿದ್ಳು. ಇದಕ್ಕೆ ಶಿವಸೇನಾ ನಾಯಕ ಸಂಜಯ ರಾವತ್ ಸಹ ತಿರುಗೇಟು ನೀಡಿದ್ರು. ಇದರ ಜೊತೆಗೆ ಸರ್ಕಾರ ಸಹ ನಟಿ ವಿರುದ್ಧ ತಿರುಗಿ ಬಿದ್ದಿದ್ದು, ಕಂಗನಾ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾಳೆ ಎಂದು ಹೇಳಿ ನಿನ್ನೆ ನೋಟಿಸ್ ನೀಡಿದ್ರು. ಇಂದು ಒಡೆದು ಹಾಕಿದ್ದಾರೆ.
ತನ್ನ ಕಟ್ಟಡವನ್ನ ರಾಮ ಮಂದಿರಕ್ಕೆ ಹೋಲಿಸಿರುವ ನಟಿ, ಬಾಬರ್ ಇದನ್ನ ಒಡೆದು ಹಾಕ್ತಿರುವುದಾಗಿ ತೀಕ್ಷಣವಾಗಿ ಮತ್ತೊಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ನಟಿ ಕಂಗನಾ ಮುಂಬೈಗೆ ಬಂದಿದ್ದು ವೈ ಪ್ಲಸ್ ಭದ್ರತೆ ನೀಡಲಾಗಿದೆ. ಕಟ್ಟಡ ನೆಲಸಮ ಸಂಬಂಧ ಹೈಕೋರ್ಟ್ ಮೆಟ್ಟಿಲು ಏರುವುದಾಗಿ ತಿಳಿಸಿದ್ದಾರೆ.
ಓರ್ವ ಸ್ಟಾರ್ ನಟಿ ಕಟ್ಟಡ ನಿರ್ಮಾಣ ಮಾಡುವ ಟೈಂನಲ್ಲಿ ಮುನಿಷಿಪಲ್ ಕಾರ್ಪೋರೇಷನ್ ನಿಂದ ಪರವಾನಿಗೆ ಪಡೆದಿರಲಿಲ್ಲವಾ? ಕಟ್ಟಡ ನಿರ್ಮಾಣಕ್ಕೆ ಪರಿವಾನಿಗೆ ನೀಡಿದ್ರೆ, ಅಂದು ಪರಿಶೀಲನೆ ಮಾಡಿರಲಿಲ್ವಾ? ಇದು ರಾಜಕೀಯ ಪ್ರೇರಿತ ದಾಳಿಯಾ ಅನ್ನೋ ಪ್ರಶ್ನೆ ಮೂಡಿದೆ.