ಬಾಲಿವುಡ್ ನಟಿ ಕಂಗನಾ ರನಾವತ್ ಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. ಗಣರಾಜ್ಯೋತ್ಸವದ ಟೈಂನಲ್ಲಿ ಪ್ರತಿ ವರ್ಷ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತೆ. ಚಿತ್ರರಂಗದಲ್ಲಿ ಈ ಬಾರಿ 4 ಜನರಿಗೆ ನೀಡಿದ್ದಾರೆ. ನಿರ್ಮಾಪಕಿ ಏಕ್ತಾ ಕಪೂರ್, ನಿರ್ದೇಶಕ ಕರಣ ಜೋಹರ್, ಗಾಯಕ ಅದ್ನಾನ್ ಸಮಿ ಹಾಗೂ ನಟಿ ಕಂಗನಾ ರನಾವತ್ ಗೆ ಪದ್ಮಶ್ರೀ ನೀಡಲಾಗಿದೆ.
ನಟಿ ಕಂಗನಾಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಫ್ಯಾನ್ಸ್ ಅಸಮಾಧಾನ ಹೊರ ಹಾಕಿದ್ದಾರೆ. ಕಂಗನಾಗೆ ಪ್ರಶಸ್ತಿ ನೀಡಿದಕ್ಕೆ ಗೌರವಿಸೋಣ. ಆದ್ರೆ, ಕಂಗನಾ ಹುಟ್ಟುವ ಮೊದ್ಲೇ ಶಿವಣ್ಣನ ಸಿನಿ ಜರ್ನಿ ಶುರುವಾಗಿದೆ. ಅವರಿಗೀಗ 57 ವರ್ಷ. ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಬದ್ಲು ಕಂಗನಾ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಡಾ.ರಾಜಕುಮಾರ ಹೊರತು ಪಡಿಸಿ ಕನ್ನಡದ ಯಾವ ನಟನಿಗೂ ಪದ್ಮಶ್ರೀ ಪ್ರಶಸ್ತಿ ನೀಡಿಲ್ಲ. ಇದನ್ನ ಕನ್ನಡಿಗರು ನೆನಪಿಡಬೇಕು. ರಾಜಕೀಯ ಮರೆತು ಎಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸಬೇಕು ಎಂದಿದ್ದಾರೆ. ಕನ್ನಡ ನಟ, ನಟಿಯರು ಬಿಟ್ಟು ಬೇರೆ ಭಾಷೆಯ ಕಲಾವಿದರು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆಯುತ್ತಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಅನ್ಯಾಯವಾಗ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಲಾಗ್ತಿದೆ.