ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮಂಗಳೂರು: ಕಾಂತಾರ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಹೇಳಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ದಲಿತಪರ ಸಂಘಟನೆಗಳು ಮನವಿ ಮಾಡಿವೆ. ಚಿತ್ರದಲ್ಲಿ ದಲಿತರಿಗೆ, ದೈವ ನರ್ತಕರಿಗೆ ಅವಮಾನ ಮಾಡಲಾಗಿದೆ ಎಂದು ಹೇಳಲಾಗಿದೆ.
ಕೆಳ ಸಮುದಾಯದ ಹುಡುಗರನ್ನು ಪೋಲಿ ಎಂಬಂತೆ ತೋರಿಸಲಾಗಿದೆ. ಹಣ, ಹೆಂಡ ಕೊಟ್ಟರೆ ಏನು ಬೇಕಾದರು ಮಾಡುತ್ತಾರೆ ಅಂತಾ ಬಿಂಬಿಸಲಾಗಿದೆ. ದಲಿತ ಮಹಿಳೆಯರು ಹಾಗೂ ಯುವ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ಹೀಗಾಗಿ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಸಮತಾ ಸೈನಿಕದಳ ಒತ್ತಾಯಿಸಿದೆ.