‘ಮೋದಿ ಕೆಲಸ ಮಾಡಿದವರೆಲ್ಲ ರಾಜ್ಯಪಾಲರು’

343

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 12 ರಾಜ್ಯಗಳಿಗೆ ಹೊಸದಾಗಿ ರಾಜ್ಯಪಾಲರನ್ನು ನೇಮಿಸಲಾಗಿದೆ. ಇದರಲ್ಲಿ ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಸಹ ಒಬ್ಬರಾಗಿದ್ದಾರೆ. ಇವರನ್ನು ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ನೇಮಿಸಲಾಗಿದೆ.

ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ. ಅದಾನಿಗಾಗಿ ಮೋದಿ ಕೆಲಸ ಮಾಡುತ್ತಾರೆ. ಮೋದಿಗಾಗಿ ಕೆಲಸ ಮಾಡಿದವರೆಲ್ಲ ಈಗ ರಾಜ್ಯಪಾಲರಾಗಿದ್ದಾರೆ. ಹಾಗಾದರೆ ಜನರ ಕೆಲಸ ಮಾಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ನಜೀರ್ ಅವರು, ರಾಮ ಜನ್ಮಭೂಮಿ ಪ್ರಕರಣ, ನೋಟು ಅಮಾನ್ಯೀಕರಣ ಪ್ರಕರಣ, ತ್ರಿವಳಿ ತಾಲಕ್ ರದ್ದತಿ ಪ್ರಕರಣಗಳನ್ನು ಎತ್ತಿ ಹಿಡಿದು ತೀರ್ಪುಗಳನ್ನು ನೀಡಿದ ನ್ಯಾಯಪೀಠದಲ್ಲಿ ಒಬ್ಬರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!