ನವದೆಹಲಿ: ದೆಹಲಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಮೂವರು ಶಂಕಿತ ಉಗ್ರರನ್ನ ಬಂಧಿಸಲಾಗಿದೆ. ಬಂಧಿತರು ನಿಷೇಧಿತ ಐಎಸ್ಐ ಉಗ್ರ ಸಂಘಟನೆಯಿಂದ ಪ್ರೇರಣೆ ಪಡೆದಿದ್ರು ಅಂತಾ ಹೇಳಲಾಗ್ತಿದೆ. ಖ್ವಾಜಾ ಮೊಹಿನುದ್ದೀನ್, ಸೈಯದ್ ನವಾಜ್ ಹಾಗೂ ಅಬ್ದುಲ್ ಎಂದು ಗುರುತಿಸಲಾಗಿದೆ.
ಕೆಲ ದಿನಗಳ ಹಿಂದೆ ನಡೆದಿದ್ದ ಹಿಂದೂ ಮುನ್ನಾನಿ ಸಂಘಟನೆಯ ಸುರೇಶಕುಮಾರ ಹತ್ಯೆಯಲ್ಲಿ ಬಂಧಿತ ಭಯೋತ್ಪಾದಕರ ಕೈವಾಡವಿದೆ ಅನ್ನೋ ಮಾಹಿತಿ ಸಿಕ್ಕಿತ್ತು. ಹೀಗಾಗಿ ಇವರ ಮೇಲೆ ನಿಗಾವಹಿಸಿದ್ದ ದೆಹಲಿ ಪೊಲೀಸ್ರು ಮೂವರನ್ನ ಅರೆಸ್ಟ್ ಮಾಡಿದ್ದಾರೆ. ಈ ಮೂವರು ವಿದೇಶ ವ್ಯಕ್ತಿಯಿಂದ ಸೂಚನೆ ಪಡೆದುಕೊಂಡು ದಾಳಿಗೆ ಸಂಚು ರೂಪಿಸಿದ್ರು. ಬಂಧನದ ವೇಳೆ ಐಎಸ್ಐ ಉಗ್ರ ಸಂಘಟನೆಗೆ ಸೇರಿದ ಪುಸ್ತಕಗಳು ಸೇರಿದಂತೆ ಹಲವು ವಸ್ತುಗಳು ಸಿಕ್ಕಿವೆ.