ಪ್ರಜಾಸ್ತ್ರ ಸುದ್ದಿ
ಕೊಪ್ಪಳ: ಇಂದು ಬೆಳಗ್ಗೆ ಬ್ಯಾಂಕ್ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಇಂದು ನಸುಕಿನ ಜಾವ ಕೊಪ್ಪಳದ ಬ್ಯಾಂಕ್ ಆಫ್ ಇಂಡಿಯಾದ ಹಿಂಭಾಗದ ಗೋಡೆ ಕೊರೆದು ದರೋಡೆಗೆ ಯತ್ನಿಸಲಾಗಿದೆ.
ಬ್ಯಾಂಕ್ ದರೋಡೆಗೆ ಯತ್ನಿಸಿದ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರ ನೆರವಿನೊಂದಿಗೆ ಪೊಲೀಸ್ರು ಮೂವರನ್ನ ಬಂಧಿಸಿದ್ದಾರೆ. ದೇವಪ್ಪ ಹೊಸಳ್ಳಿ, ಶರಣಪ್ಪ ಬೇವಿನಹಳ್ಳಿ ಹಾಗೂ ಮಾರುತಿ ಗದ್ದಿ ಅನ್ನೋ ಮೂವರನ್ನ ಬಂಧಿಸಲಾಗಿದೆ.