ಅಪಹಾಸ್ಯಕ್ಕೆ ಕಾರಣವಾಯ್ತು ಧಾರವಾಹಿಯ ಈ ದೃಶ್ಯ

327

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಾಲಿಯಲ್ಲಿ ಕೃಷ್ಣಕೋಲಿ ಅನ್ನೋ ಧಾರವಾಹಿ ಪ್ರಸಾರವಾಗುತ್ತೆ. ಇದರಲ್ಲಿನ ದೃಶ್ಯವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ನಗುವಿನ ಅಲೆ ಎಬ್ಬಿಸಿದೆ. ಕಾರಣ, ಡಾಕ್ಟರ್ ಕೈಯಲ್ಲಿ ಬಚ್ಚಲುಮನೆಯ ಬ್ರಷ್ ಇರುವುದು.

ಯೆಸ್, ಈ ಧಾರವಾಹಿಯ ದೃಶ್ಯವೊಂದರಲ್ಲಿ ರೋಗಿಯ ಹೃದಯ ಬಡಿತ ಸಹಜ ಸ್ಥಿತಿಗೆ ತರಲು ಡೆಫಿಬ್ರಿಲೇಟರ್ ಬಳಸಿಕೊಂಡು ಚಿಕಿತ್ಸೆ ನೀಡುವುದಾಗಿದೆ. ಆದ್ರೆ, ಇದಕ್ಕಾಗಿ ಬಚ್ಚಲುಮನೆಯಲ್ಲಿ ಬಳಸುವ ಸ್ಕ್ರಬ್ಬರ್ ಬಳಿಸಿರುವುದು ಎಲ್ಲರ ನಗುವಿಗೆ ಕಾರಣವಾಗಿದೆ.

ಟ್ವೀಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯದಲ್ಲಿ ಬಳಿಸಿರುವ ಸಾಧನದ ಚರ್ಚೆ ಜೋರಾಗಿದೆ. ಹಲವಾರು ರೀತಿಯಲ್ಲಿ ಟ್ವೀಟ್ ಮಾಡಿ ಎಂಜಾಯ್ ಮಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!