ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೃಷಿ ಮಸೂದೆ ವಿರೋಧಿಸಿ ಭಾರತ ಕಿಸಾನ್ ಯೂನಿಯನ್ ಸಂಘಟನೆ ಕರೆ ನೀಡಿರುವ ಭಾರತ ಬಂದ್ ಗೆ ಎಲ್ಲೆಡೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕರ್ನಾಟಕದಲ್ಲಿಯೂ ಅದರ ಕಾವು ಒಂದಿಷ್ಟು ಕಾಣಿಸ್ತಿದೆ. ಬಂದ್ ಎಫೆಕ್ಟ್ ಹಲವು ಜಿಲ್ಲೆಗಳಲ್ಲಿ ಶುರುವಾಗಿದೆ.
ಉದ್ಯಾನನಗರಿ ಬೆಂಗಳೂರು, ಬಂದರುನಗರಿ ಮಂಗಳೂರು, ಕುಂದಾನಗರಿ ಬೆಳಗಾವಿ ಸೇರಿದಂತೆ ಹುಬ್ಬಳ್ಳಿ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಬಂದ್ ಬಿಸಿ ತಟ್ಟುತ್ತಿದೆ. ಹಲವು ಕಡೆ ಬಸ್ ಸಂಚಾರ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಇದ್ರಿಂದಾಗಿ ಪ್ರಯಾಣಿಕರ ಪರದಾಟ ಶುರುವಾಗಿದೆ.