ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೇಂದ್ರ ಬಜೆಟ್ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಜನರು ಮನೆಯಲ್ಲಿ ಮಲಗಿ ಎನ್ನುವಂತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜನಸಾಮಾನ್ಯರ ಪಾಲಿಗೆ ಆಶಾಕಿರಣವಾಗಬೇಕಿದ್ದ ಬಜೆಟ್ ನಲ್ಲಿ ಏನೂ ಇಲ್ಲ.
ಜನಸಾಮಾನ್ಯರ ಬಗ್ಗೆ ಬಜೆಟ್ ಯೋಚನೆಯೇ ಮಾಡಿಲ್ಲ. ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಕ್ಕ ಜನರ ಬಗ್ಗೆ ಕಾಳಜಿಯಿಲ್ಲ. ಕೋವಿಡ್ ನಿಂದ ಬಡವರು ಇನ್ನಷ್ಟು ಬಡವರಾಗಿದ್ದಾರೆ. ಶ್ರೀಮಂತರ ಮತ್ತಷ್ಟು ಶ್ರೀಮಂತರಾಗಿದ್ದಾರೆ. ರೈತರು, ಕಾರ್ಮಿಕರು ಸೇರಿ ಜನಸಾಮಾನ್ಯರ ಆರ್ಥಿಕತೆ ಮೇಲೆತ್ತುವ ಯಾವ ಅಂಶವೂ ಬಜೆಟ್ ನಲ್ಲಿ ಇಲ್ಲವೆಂದು ಹೆಚ್ಡಿಕೆ ಹೇಳಿದ್ದಾರೆ.