ಬೆಂಗಳೂರು : ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಬೆಂಗಳೂರಿನ ನವರಂಗ ಬಳಿ ಸರ್ಕಾರಿ ಬಸ್ ವೊಂದು ಅಪಘಾತಕ್ಕಿಡಾಗಿದೆ. ಇದರಿಂದಾಗಿ ಓರ್ವ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.
ಲಗ್ಗೇರಿ ಮೂಲದ ರವಿ ಎಂಬಾತ ಸಾವನ್ನಪ್ಪಿದ ದುರ್ದೈವಿ ಎನ್ನಲಾಗ್ತಿದೆ. ಪಕ್ಕದ ಮನೆಯ ಮಗವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದ ರವಿ, ಬಸ್ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ನವರಂಗ್ ಸರ್ಕಲ್ ಬಳಿ ಡಿವೈಡರ್ ಹಾರಿ ಬಂದ ಬಸ್, ಕಾರಿಗೆ ಗುದ್ದಿದೆ. ಇದರ ಪರಿಣಾಮ ರವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡ್ರೈವರ್ ಹಾಗೂ ಕಂಡೆಕ್ಟರ್ ಇಬ್ಬರನ್ನು ಬಂಧಿಸಲಾಗಿದೆ.