ಕಾರು ಅಪಘಾತ: ಬಾಲಕ ಸೇರಿ 2 ಹಸು ಸಾವು

286

ಪ್ರಜಾಸ್ತ್ರ ಸುದ್ದಿ

ಶ್ರೀರಂಗಪಟ್ಟಣ: ಕಾರು ಡಿಕ್ಕಿ ಹೊಡೆದ ಪರಿಣಾಮ 11 ವರ್ಷದ ಬಾಲಕ ಹಾಗೂ ಎರಡು ಹಸು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ನಡೆದಿದೆ. 11 ವರ್ಷದ ಆಕಾಶ ಮೃತ ಬಾಲಕ. ಇನ್ನು ಘಟನೆಯಲ್ಲಿ ಎರಡು ಹಸುಗಳು ಸಹ ಸಾವನ್ನಪ್ಪಿವೆ.

ಹೊಲಕ್ಕೆ ಹೋಗಲು ರಸ್ತೆ ದಾಟುತ್ತಿದ್ದ ಬಾಲಕನಿಗೆ ಹಾಗೂ ಹಸುಗಳಿಗೆ ಬೆಂಗಳೂರಿನಿಂದ ವೇಗವಾಗಿ ಬರ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಇದ್ರಿಂದಾಗಿ ಇಷ್ಟೊಂದು ಅನಾಹುತ ಸಂಭವಿಸಿದೆ. ಅಪಘಾತದಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಕೆಲಕಾಲ ಅಸ್ತವ್ಯಸ್ಥವಾಗಿತ್ತು.

ಕೆ.ಆರ್ ಪೇಟೆ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಲೋಕೇಶ ಎಂಬುವರ ಮಗ ಆಕಾಶ, ಅಜ್ಜಿಯ ಮನೆಗೆ ಬಂದಿದ್ದ. ಬೆಳಗ್ಗೆ ಹೊಲಕ್ಕೆ ಹೋಗಲು ರಸ್ತೆ ದಾಟುವಾಗ ಅಪಘಾತಕ್ಕೆ ಬಲಿಯಾಗಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!