ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತರು ನಡೆಸ್ತಿರುವ ಬೃಹತ್ ಪ್ರತಿಭಟನೆ ಮುಂದುವರೆದಿದೆ. ಇದರ ನಡುವೆ ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಸೋಮವಾರ ನಡೆದ ಮಾತುಕತೆ ಮತ್ತೆ ವಿಫಲವಾಗಿದೆ. ಇದರೊಂದಿಗೆ 8ನೇ ಬಾರಿಯೂ ಮಾತುಕತೆ ಸಕ್ಸಸ್ ಆಗ್ಲಿಲ್ಲ.
ಕೃಷಿ ಕಾಯ್ದೆಗಳನ್ನ ಹಿಂದಕ್ಕೆ ಪಡೆಯಬೇಕು ಎಂದು ರೈತ ಮುಖಂಡರು ವಾದಿಸಿದ್ರು. ಕೇಂದ್ರದ ಮೂವರು ಸಚಿವರು ಕಾಯ್ದೆ ಬಗ್ಗೆ ವಿವರಿಸಿದ್ರು. ಆದ್ರೆ, ಇಬ್ಬರ ನಡುವೆ ಯಾವುದೇ ಒಮ್ಮತ ಮೂಡಲಿಲ್ಲ. ಬಳಿಕ ದೀರ್ಘ ವಿರಾಮದ ನಂತರ ಮತ್ತೆ ಸಭೆ ನಡೆಸಿದ್ರು.
ಸಂಜೆ 5ಗಂಟೆಯ ನಂತರ ಮತ್ತೆ ನಡೆಸಿದ ಸಭೆಯೂ ಸಹ ಫಲ ನೀಡಲಿಲ್ಲ. ಹೀಗಾಗಿ ಸರ್ಕಾರ ಆತಂರಿಕ ಸಮಾಲೋಚನೆ ನಡೆಸಿ ರೈತ ಒಕ್ಕೂಟಕ್ಕೆ ತಿಳಿಸುವುದಾಗಿ ಹೇಳಿತು. ಇನ್ನು ಜನವರಿ 5ರಂದು ರೈತ ಒಕ್ಕೂಟದ ಸಭೆ ನಡೆಯಲಿದ್ದು, ಮುಂದಿನ ನಡೆಯ ಬಗ್ಗೆ ಚರ್ಚಿಸಲಾಗ್ತಿದೆ ಎಂದು ತಿಳಿದು ಬಂದಿದೆ. ಜನವರಿ 8ಕ್ಕೆ ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಗಿದೆ.