‘ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ’

285

ಪ್ರಜಾಸ್ತ್ರ ಸುದ್ದಿ

ರಾಮನಗರ: ಚನ್ನಪಟ್ಟಣ ತಾಲೂಕಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತ್ನಾಡಿದ ಮಾಜಿ ಸಿಎಂ, ಶಾಸಕ ಕುಮಾರಸ್ವಾಮಿ, ಜಿಲ್ಲೆಯ ನಾಲ್ವರನ್ನ ಮಂತ್ರಿ ಮಾಡಲಿ. ಮಂತ್ರಿ ಮಾಡಬೇಡಿ ಎಂದು ಹೇಳುವಷ್ಟು ಕೀಳು ಮಟ್ಟಕ್ಕೆ ನಾವು ಇಳಿದಿಲ್ಲವೆಂದರು.

ನಾವು ಎಂಥೆಂತವರನ್ನ ನೋಡಿಲ್ವಾ.. ಇಲ್ಯಾರೋ ಮಂತ್ರಿಯಾದ್ರೆ ಹೆದರಕೊಂಡು ಹೋಗುವುದಿಲ್ಲ. 20 ಕೆರೆ ತುಂಬಿಸಿ ಭಗೀರಥ ಆದ್ರು. ನಾನು 128 ಕೆರೆ ಕಟ್ಟಿಸಿದ್ದೇನೆ. ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿ.ಪಿ ಯೋಗೇಶ್ವರ ವಿರುದ್ಧ ವಾಗ್ದಾಳಿ ನಡೆಸಿದ್ರು.

ಇನ್ನು ಲಿಂಗಾಯತ ಸಮುದಾಯವನ್ನ ಒಬಿಸಿ ಸೇರಿಸುವ ಸಂಬಂಧ ಕೇಳಿದ ಪ್ರಶ್ನೆಗೆ, ಸ್ವಾರ್ಥಕ್ಕಾಗಿ ಮಾಡ್ತಿರುವ ವಿವಾದಾತ್ಮಕ ವಿಚಾರಗಳಿಗೆ ನಾನು ತಲೆ ಹಾಕುವುದಿಲ್ಲವೆಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!