ಬ್ರೇಕಿಂಗ್ ನ್ಯೂಸ್: ಏಪ್ರಿಲ್ 6ತನಕ ಶೇ 100ರಷ್ಟು ಥಿಯೇಟರ್ ಸೀಟು ಭೆರ್ತಿಗೆ ಅವಕಾಶ

240

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಏಪ್ರಿಲ್ 6ರ ತನಕ ಕೋವಿಡ್ ಮಾರ್ಗಸೂಚಿ ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶುಕ್ರವಾರ ಸಂಜೆಯಷ್ಟೇ ಥಿಯೇಟರ್ ಗಳಲ್ಲಿ ಶೇಕಡ 50ರಷ್ಟು ಭರ್ತಿ ಎಂದಿತ್ತು. ಇದೀಗ ಏಪ್ರಿಲ್ 6ರ ತನಕ ಸಡಿಲಿಕೆ ಮಾಡಿದೆ.

ಪವರ್ ಸ್ಟಾರ್ ಪುನೀತರಾಜಕುಮಾರ ನಟನೆಯ ಯುವರತ್ನ ಸಿನಿಮಾ ರಿಲೀಸ್ ಆಗಿ ಒಂದು ದಿನ ಆಗಿತ್ತು. ಸರ್ಕಾರ ಹೊಸ ನಿಯಮ ಬಿಡುಗಡೆ ಮಾಡಿತ್ತು. ಇದಕ್ಕೆ ಅಪ್ಪು, ಶಿವಣ್ಣ, ಸುದೀಪ, ಯಶ ಸೇರಿದಂತೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕಿಡಿ ಕಾರಿದ್ರು.
ಇಂದು ಮಧ್ಯಾಹ್ನ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ಮಾಡಲಾಗಿತ್ತು.

ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ ಹಾಗೂ ನಟ ಪುನೀತರಾಜಕುಮಾರ‌ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ರು. ಇದಕ್ಕೆ ಸ್ಪಂದಿಸಿರುವ ಸಿಎಂ ಏಪ್ರಿಲ್ 6ರ‌ ತನಕ ಶೇಕಡ 100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದ್ದು, ಬಳಿಕ ಶೇಕಡ 50ರಷ್ಟು‌ ಆಗಲಿದೆ ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!