ಕರೋನಾ ಕಾರ್ಮೋಡ: ಬಂದ್ ಮುಂದುವರಿಕೆ

845

ಬೆಂಗಳೂರು: ಕರೋನಾ ಮಹಾಮಾರಿಯಿಂದಾಗಿ ಮಾರ್ಚ್ 31ರ ವರೆಗೂ ಕರ್ನಾಟಕ ಬಂದ್ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ದೇಶ ಹಾಗೂ ರಾಜ್ಯದಲ್ಲಿ ಕರೋನಾ ವೈರಸ್ ದಾಳಿ ಹೆಚ್ಚಾಗ್ತಿದ್ದು, ಇದಕ್ಕೆ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಲಾಗ್ತಿದೆ ಎಂದಿದ್ದಾರೆ.

ಮಾರ್ಚ್ 14 ರಿಂದ ಒಂದು ವಾರ ಅರ್ಧ ಕರ್ನಾಟಕ ಬಂದ್ ಆದೇಶಿಸಲಾಗಿತ್ತು. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಅದನ್ನ ಇದೀಗ ಮಾರ್ಚ್ 31ರ ತನಕ ಮುಂದೂಡಲಾಗಿದೆ. ಅಲ್ದೇ, ರಾಜ್ಯದಲ್ಲಿ ನಡೆಯಬೇಕಿದ್ದ ಪಂಚಾಯ್ತಿ ಚುನಾವಣೆಗಳು ಸಹ ಮುಂದೂಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!