ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೋವಿಡ್ ವಾರ್ ರೂಮ್ ಗೆ ನೋಡಲ್ ಆಫೀಸರ್ ಗಳ ನೇಮಕಕ್ಕೆ ಸಂಬಂಧಿಸಿದಂತೆ ವಿವಾದ ಶುರುವಾಗಿದೆ. ಜನಾಗ್ರಹ ಸಂಸ್ಥೆಯ ಸ್ವಾತಿ ರಾಮನಾಥನ್ ಅವರನ್ನ ನೇಮಕ ಮಾಡಿರುವುದಕ್ಕೆ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೋಡಲ್ ಆಫೀಸರ್ ಗಳ ನೇಮಕದಲ್ಲಿ ಸ್ವಜನ ಪಕ್ಷಪಾತದ ಆರೋಪ ಕೇಳಿ ಬಂದಿದೆ. ಸ್ಪೆಷಲ್ ಕಮಿಷನರ್ ಗಳ ಕಡೆಗಣನೆ ಮಾಡಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ತಜ್ಞರು, ಅಧಿಕಾರಿಗಳಿಂದ ಇದೀಗ ಅಸಮಾಧಾನ ವ್ಯಕ್ತವಾಗಿದೆ.
ಕೋವಿಡ್ ಬಗ್ಗೆ ಪರಿಜ್ಞಾನವೇ ಇಲ್ಲದವರನ್ನು ನೇಮಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕಳೆದೊಂದು ವರ್ಷದಿಂದ ಕೋವಿಡ್ ಬಗ್ಗೆ ಒಂದು ಮಾತು ಕೂಡ ಆಡದವರಿಗೆ ಉಸ್ತುವಾರಿ ಹೊಣೆ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಕಂದಾಯ ಇಲಾಖೆ ಎಸಿಎಸ್ ಮಂಜುನಾಥಪ್ರಸಾದ ನೇತೃತ್ವದಲ್ಲಿ ನೋಡಲ್ ಆಫೀಸರ್ ಗಳನ್ನ ಸರ್ಕಾರ ನೇಮಿಸಿದೆ.