ಒಕ್ಕಲಿಗರು ಸಂಸ್ಕೃತಿ ಹೀನರು: ಭಗವಾನ್ ಮತ್ತೊಂದು ವಿವಾದ

226

ಪ್ರಜಾಸ್ತ್ರ ಸುದ್ದಿ

ಮೈಸೂರು: ಸಾಕಷ್ಟು ಪರ ವಿರೋಧದ ನಡುವೆ ಶುಕ್ರವಾರ ಮೈಸೂರಿನಲ್ಲಿ ಮಹಿಷ ದಸರಾ ಆಚರಿಸಲಾಗಿದೆ. ಇದರ ಪ್ರಯುಕ್ತ ಪುರಭವನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್ ಭಗವಾನ್ ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

ಒಕ್ಕಲಿಗರು ಸಂಸ್ಕೃತಿ ಹೀನರು ಅಥವ ಹೀನ ಸಂಸ್ಕೃತಿಯುಳ್ಳವರು. ಆದರೆ, ಇದನ್ನು ನಾನು ಹೇಳಿದ್ದಲ್ಲ ಕುವೆಂಪು ಅವರು ಹೇಳಿದ್ದು ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಇದು ನನ್ನ ಮಾತಲ್ಲ. ಕುವೆಂಪು ಮಾತು ಇಲ್ಲಿ ನಾನು ಉಲ್ಲೇಖ ಮಾಡುತ್ತಿದ್ದೇನೆ. ಇಲ್ಲದಿದ್ದರೆ ನನ್ನನ್ನು ಕೊಂದು ಬಿಡುತ್ತಾರೆ ಎಂದಿದ್ದಾರೆ.

ಭಗವಾನರ ಈ ಮಾತು ಹೊಸ ವಿವಾದ ಸೃಷ್ಟಿಸಿದೆ. ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದಿಂದ ಇಂದು ಪ್ರತಿಭಟನೆ ನಡೆಸಲಾಗಿದೆ. ಅವರ ಮನೆಗೆ ಮುತ್ತಿಗೆ ಹಾಕಲು ಕರೆ ನೀಡಿದ್ದು, ಅವರ ಮನೆ ಸುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇದು ದೊಡ್ಡ ಮಟ್ಟದ ಸ್ವರೂಪ ಪಡೆಯುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!