ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಗರದ ಖ್ಯಾತ ಕಬ್ಬನ್ ಪಾರ್ಕ್ ನಲ್ಲಿ ಮಂಟಪವೊಂದು ಕುಸಿದು ಬದ್ದಿದೆ. ಸಾರ್ವಜನಿಕರಿಗೆ ಆಶ್ರಯ ನೀಡುವ ಸಂಬಂಧ ನಿರ್ಮಿಸಲಾಗ್ತಿರುವ ಮಂಟಪ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವೆಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.
ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸಧ್ಯ ಪಾರ್ಕ್ ನಲ್ಲಿ ಜನರು ಬರ್ತಿಲ್ಲ. ಇದ್ರಿಂದಾಗಿ ಅನಾಹುತ ತಪ್ಪಿದೆ. ಕೇವಲ ನಾಲ್ಕೈದು ವರ್ಷಗಳ ಹಿಂದೆ ಅಂದಾಜು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮಂಟಪ ಬದ್ದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ ಒತ್ತಾಯಿಸಿದ್ದಾರೆ.