ಡಾ.ವಿಷ್ಣುವರ್ಧನ ನಾಟಕೋತ್ಸವ: ಕಿಚ್ಚ ಶುಭಾಶಯದ ಟ್ವೀಟ್

380

ಬೆಂಗಳೂರು: ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ಸೆಪ್ಟಂಬರ್ 18ರಿಂದ 20ರ ತನಕ ‘ಡಾ.ವಿಷ್ಣುವರ್ಧನ ನಾಟಕೋತ್ಸವ’ ಆಯೋಜಿಸಲಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿದಿನ ರಾತ್ರಿ 8ಗಂಟೆಯಿಂದ 10ಗಂಟೆಯ ತನಕ ನಾಟಕ ಪ್ರದರ್ಶನ ನಡೆಯಲಿದೆ ಅಂತಾ ತಿಳಿಸಲಾಗಿದೆ.

ಇದು ಯಾರೋ ಒಬ್ಬರ ನಾಟಕೋತ್ಸವಲ್ಲ. ಸಮಸ್ತ ಕರ್ನಾಟಕದ ನಾಟಕೋತ್ಸವ ಎಂದು ಸಮಿತಿ ತಿಳಿಸಿದೆ. ಮೈಸೂರಿನ ನಟನ, ಬೆಂಗಳೂರಿನ ರಂಗಪಯಣ, ಧಾರವಾಡದ ಗಂಗಾವತರಣ, ಕರಾವಳಿಯ ಅನಲ, ಅಶ್ವಘೋಷ ರಂಗ ತಂಡಗಳು ನಾಟಕೋತ್ಸವದಲ್ಲಿ ಪ್ರದರ್ಶನ ನೀಡಲಿವೆ.

ಇನ್ನು ವಿಷ್ಣು ನಟನೆಯ ಚಿತ್ರಗೀತೆಗಳ ಸಂಗೀತ ಸಂಜೆ, ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಕನ್ನಡ ರತ್ನ ಪ್ರಶಸ್ತಿ ಪ್ರದಾನ, ಛಾಯಾಚಿತ್ರ ಪ್ರದರ್ಶನ ಸಹ ನಡೆಯಲಿದೆ. ಈ ಬಗ್ಗೆ ಕಿಚ್ಚ ಸುದೀಪ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!