ಪ್ರಜಾಸ್ತ್ರ ಸುದ್ದಿ
ವಿಜಯಪುರ: ರಾಜ್ಯದಲ್ಲಿ ವಾಡಿಕೆಯಂತೆ ಸರಿಯಾಗಿ ಮಳೆಯಾಗಿಲ್ಲ. ಹೀಗಾಗಿ ಬಹುತೇಕ ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿಕೊಂಡಿದೆ. ಈ ಬಗ್ಗೆ ವಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬರ ಘೋಷಣೆ ಮಾಡಿ ಎನ್ನುತ್ತಿವೆ. ಇಂದು ನಗರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಂಟಿ ಸರ್ವೇ ಬಳಿಕ ಬರ ಘೋಷಿಸುತ್ತೇವೆ ಎಂದರು.
113 ತಾಲೂಕುಗಳಲ್ಲಿ ಬರವಿದೆ. ಇನ್ನು 73 ಬಡೆ ಬರವಿದೆ ಅನ್ನೋ ಮಾಹಿತಿ ಇದೆ. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಲಾಗುತ್ತೆ. ಈ ಸಭೆಯಲ್ಲಿ ಎಷ್ಟು ತಾಲೂಕುಗಳಲ್ಲಿ ಬರವಿದೆ ಎಂದು ಘೋಷಣೆ ಮಾಡುತ್ತೇವೆ. ಇದಕ್ಕಾಗಿ ಸೆಪ್ಟೆಂಬರ್ 4ರಂದು ಸಭೆ ಕರೆಯಲಾಗಿದೆ ಅಂತಾ ಹೇಳಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಎಂ.ಬಿ ಪಾಟೀಲ ಸೇರಿದಂತೆ ಹಲವು ನಾಯಕರು ಆಲಮಟ್ಟಿಯಲ್ಲಿನ ಕೃಷ್ಣ ನದಿಗೆ ಬಾಗಿನ ಅರ್ಪಿಸಿದರು. ಹೀಗಾಗಿ ವಿಜಯಪುರಕ್ಕೆ ಬಂದಿದ್ದ ಸಿಎಂ, ಡಿಸಿಎಂ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.