ಪ್ರಜಾಸ್ತ್ರ ಸುದ್ದಿ
ನವದೆಹಲಿ: ಹಾಲಿವುಡ್ ಗಾಯಕಿ ರಿಹಾನ್ನಾ ರೈತರು ನಡೆಸ್ತಿರುವ ಪ್ರತಿಭಟನೆ ಕುರಿತು, ಈ ಬಗ್ಗೆ ಯಾಕೆ ಮಾತ್ನಾಡಬಾರದು ಎಂದು ಟ್ವೀಟ್ ಮಾಡಿದ್ದಾರೆ. ಹೀಗಾಗಿ ಕೋಟ್ಯಾಂತರ ಜನರನ್ನ ಟ್ವೀಟರ್ ನಲ್ಲೇ ಫಾಲೋವರ್ಸ್ ಹೊಂದಿರುವ ರಿಹಾನ್ನಾ ಟ್ವೀಟ್ ಭಾರೀ ಸದ್ದು ಮಾಡಿದೆ. ಈ ಬಗ್ಗೆ ಎಲ್ಲೆಡೆ ಚರ್ಚೆ ಆಗಿ ರೈತರ ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಜೋರಾಗಿದೆ.
ಇದೀಗ ಬಾಲಿವುಡ್ ಸ್ಟಾರ್ಸ್ ಕೇಂದ್ರ ಸರ್ಕಾರದ ಪರ ಟ್ವೀಟರ್ ನಲ್ಲಿ ಬ್ಯಾಟ್ ಬೀಸಿದ್ದಾರೆ. ಅಕ್ಷಯ ಕುಮಾರ, ಸುನೀಲ ಶೆಟ್ಟಿ, ಕರಣ್ ಜೋಹರ್, ಏಕ್ತಾ ಕಪೂರ್, ಅಜಯ ದೇವಾಗನ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಮನ್, ಸ್ಮೃತಿ ಇರಾನಿ, ಹರ್ ದೀಪ್ ಸಿಂಗ್ ಪೂರಿ ಸೇರಿದಂತೆ ಇತರರು ಟ್ವೀಟ್ ಮಾಡಿದ್ದಾರೆ.
ಇಂಡಿಯಾ ಅಗೇನ್ಸ್ಟ್ ಪ್ರೊಪಗಾಂಡ್, ಇಂಡಿಯಾ ಟು ಗೆದರ್ ಎಂದು ಹ್ಯಾಶ್ ಟ್ಯಾಗ್ ಮೂಲಕ ಪೋಸ್ಟ್ ಮಾಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿರುವ ಹೇಳಿಕೆಯನ್ನ ಪೋಸ್ಟ್ ಮಾಡುವುದರ ಜೊತೆಗೆ ಜನರು ಅರ್ಧ ಸತ್ಯದ ಪರ ಮಾತ್ನಾಡದೆ ಸಮಸ್ಯೆಯನ್ನ ಸೌಹಾರ್ದಯುತವಾಗಿ ಪರಿಹಾರಕ್ಕಾಗಿ ಬೆಂಬಲಿಸೋಣ ಎಂದಿದ್ದಾರೆ.