ಪ್ರಜಾಸ್ತ್ರ ಅಪರಾಧ ಸುದ್ದಿ
ಚಿಕ್ಕಮಗಳೂರು: ಪಾರ್ಶ್ವಾವಾಯು ಪೀಡಿತದಿಂದ ಬಳಲುತ್ತಿದ್ದ ತಂದೆಯ ಮೇಲೆ ಮಗ ಕೊಡಲಿಯಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಆತ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಚನ್ನಡ್ಲಿ ಗ್ರಾಮದ ಸುಂದರ ಪೂಜಾರಿ(50) ಮೃತ ವ್ಯಕ್ತಿಯಾಗಿದ್ದಾನೆ.
ಸುಂದರಗೆ ವಾರ್ಶ್ವಾವಾಯು ಆಗಿದೆ. ಮಕ್ಕಳಿಬ್ಬರು ವಿಕಲಚೇತನರು. ಹೀಗಾಗಿ ದಾನಿಗಳು ಈ ಕುಟುಂಕ್ಕೆ ಒಂದಿಷ್ಟು ಹಣಕಾಸಿನ ನೆರವು ನೀಡಿದೆ. ಅದ್ರಿಂದ ಈ ಕುಟುಂ ಬದುಕುತ್ತಿದೆ. ಆದ್ರೆ, ಇವರ ಇನ್ನೊಬ್ಬ ಮಗ ಬೆಂಗಳೂರಿನಲ್ಲಿ ವಾಸವಾಗಿದ್ದಾನೆ.
ದಾನಿಗಳು ನೀಡಿದ ಹಣಕ್ಕಾಗಿ ಮಗ ನಿಖೇಶ ಪೀಡಿಸಲು ಶುರು ಮಾಡಿದ್ದಾನೆ. ಕೊನೆಗೆ ಕೊಡಲಿಯಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಇದ್ರಿಂದಾಗಿ ಆಸ್ಪತ್ರೆಯಲ್ಲಿ ಸುಂದರ ಮೃತಪಟ್ಟಿದ್ದಾನೆ. ಬಾಳೂರು ಠಾಣೆ ಪೊಲೀಸರು ನಿಖೇಶನನ್ನ ಬಂಧಿಸಿದ್ದಾರೆ.