ಚಾಮರಾಜಪೇಟೆಯಲ್ಲಿ ಸ್ಫೋಟ: ಮೃತದೇಹಗಳು ಛಿದ್ರ ಛಿದ್ರ

236

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ಚಾಮರಾಜಪೇಟೆ ಹತ್ತಿರದ ನ್ಯೂ ತಗರುಪೇಟೆಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಮೂವರ ಮೃತದೇಹಗಳು ಛಿದ್ರ ಛಿದ್ರವಾಗಿ ಎಲ್ಲೆಡೆ ಹಾರಿ ಬಿದ್ದಿರುವ ಘಟನೆ ನಡೆದಿದೆ. ಫಯಾಜ್, ಮನೋಹರ್, ಅಸ್ಲಂ ಮೃತ ದುರ್ದೈವಿಗಳು.

ಫಯಾಜ್ ಪಟಾಕಿ ಅಂಗಡಿ ನಡೆಸುತ್ತಿದ್ದ. ಟಾಟಾ ಏಸ್ ಚಾಲಕ ಮನೋಹರ್ ಪಟಾಕಿ ತಂದು ಅನ್ ಲೋಡ್ ಮಾಡಿ ಮತನಾಡುತ್ತಾ ನಿಂತಿದ್ದ. ಈ ವೇಳೆ ಒಳಗಡೆಯಿಂದ ಸ್ಫೋಟ ಸಂಭವಿಸಿದೆ. ಆಗ ಫಯಾಜ್, ಮನೋಹರ್ ಹಾಗೂ ಪಕ್ಕದ ಪಂಕ್ಚರ್ ಅಂಗಡಿಯ ಅಸ್ಲಂ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮೃತದೇಹಗಳು ಛಿದ್ರಗೊಂಡಿವೆ.

ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಟಾಟಾ ಏಸ್ ವಾಹನ ಸೇರಿದಂತೆ 10 ಬೈಕ್ ಗಳು ಸುಟ್ಟು ಕರಕಲಾಗಿವೆ. ಹತ್ತಿರದ ಮನೆಗಳು, ಸೇಂಟ್ ಮೇರಿ ಆಸ್ಪತ್ರೆ, ವಿದ್ಯಾರ್ಥಿ ಹಾಸ್ಟೇಲ್ ಗೂ ಹಾನಿಯಾಗಿವೆ.




Leave a Reply

Your email address will not be published. Required fields are marked *

error: Content is protected !!