ಪ್ರಜಾಸ್ತ್ರ ಸುದ್ದಿ
ಮಾಸಿನಗುಡಿ: ಆನೆಗೆ ಬೆಂಕಿ ಹಚ್ಚಿ ಕ್ರೂರವಾಗಿ ಕೊಂದ ಇಬ್ಬರನ್ನ ಬಂಧಿಸಲಾಗಿದೆ. ತಮಿಳುನಾಡಿನಲ್ಲಿ ನಡೆದಿರುವ ಈ ಘಟನೆ ಸಂಬಂಧ ಅರಣ್ಯ ಅಧಿಕಾರಿಗಳು ಇಬ್ಬರನ್ನ ಬಂಧಿಸಿದ್ದಾರೆ.
ರೆಮಾಂಡ್ ಡೀನ್ ಹಾಗೂ ಮವನಲ್ಲ ವಿಝ್ ಪ್ರಶಾಂತ ಎಂಬುವರನ್ನ ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ರಿಕಿ ರಾಯನ್ ತಲೆ ಮರೆಸಿಕೊಂಡಿದ್ದಾನೆ. ಅವನಿಗಾಗಿ ಹುಡುಕಾಟ ನಡೆಸಲಾಗ್ತಿದೆ.
ಜನವಸತಿ ಪ್ರದೇಶಕ್ಕೆ ಬಂದ ಆನೆಯನ್ನ ಬೆದರಿಸಲು ಬೆಂಕಿ ಹಚ್ಚಿದ್ದರು. ಅದರಲ್ಲೊಬ್ಬ ಸುಡುತ್ತಿದ್ದ ಕಟ್ಟಿಗೆ ಅದರ ಮೇಲೆ ಎಸೆದಿದ್ದಾನೆ. ಆಗ ಬೆಂಕಿ ಹೊತ್ತಿಕೊಂಡಿದೆ. ಇದ್ರಿಂದಾಗಿ ನೋವು ತಾಳಲಾರದೆ ಆನೆ ಸಾವನ್ನಪ್ಪಿದೆ.