ಪ್ರಜಾಸ್ತ್ರ ಸುದ್ದಿ
ಚೆನ್ನೈ: ಖ್ಯಾತ ತಮಿಳು ನಟಿ ಗೌತಮಿ ತಡಿಮಲ್ಲ, ಬಿಜೆಪಿ ಜೊತೆಗಿನ ತಮ್ಮ 25 ವರ್ಷಗಳ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿದ್ದಾರೆ. ಸೋಮವಾರ ಈ ಕುರಿತು ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
25 ವರ್ಷಗಳ ಹಾದಿಗೆ ಇಂದು ಕೊನೆಯದಾಗಿದೆ. ನನ್ನ ರಾಜೀನಾಮೆ ಪತ್ರ ಎಂದು ಬರೆದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯಾಧ್ಯಕ್ಷ ಅಣ್ಣಮಲೈ ಕೆ ಹಾಗೂ ತಮಿಳುನಾಡು ಬಿಜೆಪಿ ಎಕ್ಸ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.
ನನಗೆ ಮೋಸ ಮಾಡಿದ ವ್ಯಕ್ತಿಗೆ ಪಕ್ಷದವರೆ ಸಹಾಯ, ಬೆಂಬಲ ನೀಡುತ್ತಿದ್ದಾರೆ. ನನ್ನ ಹಣ, ಆಸ್ತಿ, ದಾಖಲೆಗಳನ್ನು ವಂಚಿಸಿದ್ದರೂ ನನಗೆ ಪಕ್ಷ ಹಾಗೂ ಮುಖಂಡರಿಂದ ಬೆಂಬಲ ಸಿಗುತ್ತಿಲ್ಲ. ನನಗೆ ಆದ ಅನ್ಯಾಯದ ಕುರಿತು ಪೊಲೀಸರಿಗೆ ದೂರು ನೀಡಿದ್ದೇನೆ. ಸಿಎಂ ಎಂ.ಕೆ ಸ್ಟಾಲಿನ್, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದ್ದು, ನ್ಯಾಯ ಸಿಗುವ ಭರವಸೆ ಇದೆ ಎಂದು ಬರೆದಿದ್ದಾರೆ.