ಕಾಡಾನೆ ದಾಳಿಗೆ ಕಡಬದಲ್ಲಿ ಇಬ್ಬರು ಬಲಿ

127

ಪ್ರಜಾಸ್ತ್ರ ಸುದ್ದಿ

ದಕ್ಷಿಣ ಕನ್ನಡ: ಕಾಡಾನೆ ದಾಳಿಯಿಂದಾಗಿ ಸೋಮವಾರ ಮುಂಜಾನೆ ಇಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಮೀನಾಡಿ ಹತ್ತಿರ ನಡೆದಿದೆ. ರಮೇಶ್ ರೈ(60) ಹಾಗೂ ರಂಜಿತಾ(21) ಮೃತ ದುರ್ದೈವಿಗಳು.

ಹಾಲು ಸಹಕಾರಿ ಸಂಘದ ಸಿಬ್ಬಂದಿಯಾಗಿದ್ದ ರಂಜಿತಾ ಮನೆಯಿಂದ ಕೆಲಸಕ್ಕೆ ಹೊರಟಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿದೆ. ರಮೇಶ್ ರೈ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ ರಂಜಿತಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯಿಂದ ಸುತ್ತಲಿನ ಜನರು ಭಯಗೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!