ಪ್ರಜಾಸ್ತ್ರ ಸುದ್ದಿ
ಚೆನ್ನೈ: ತಿಂಡಿಯೆಂದು ಸ್ಫೋಟಕ ತಿಂದ ಆರು ವರ್ಷದ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ತಮಿಳುನಾಡಿನ ತಿರುಚಾರಪಳ್ಳಿ ಬಳಿಯ ಅಲಗರೈ ಗ್ರಾಮದಲ್ಲಿ ನಡೆದಿದೆ. ಮೀನು ಹಿಡಿಯಲು ಬಳಸಲು ತಂದಿದ್ದ ಸ್ಫೋಟಕ ತಿಂದು ಬಾಲಕ ಸಾವನ್ನಪ್ಪಿದ್ದಾನೆ.
ಅಲಗರೈ ಗ್ರಾಮದ ಮೂವರು ವ್ಯಕ್ತಿಗಳು ಕಾವೇರಿ ನದಿ ದಡದಲ್ಲಿ ಮೀನು ಹಿಡಿಯಲು ದೇಶಿ ನಿರ್ಮಿತ ಜಿಲೆಟಿನ್ ಸ್ಫೋಟಕ ತಂದಿದ್ರು. ಎರಡು ಸ್ಫೋಟಕ ಬಳಿಸಿದ್ರು. ಒಂದನ್ನ ಭೂಪತಿ ಎಂಬುವರ ಮನೆಯಲ್ಲಿ ಇಡಲಾಗಿದೆ. ಇದೆ ಒಂದು ಜೀವವನ್ನ ಬಲಿ ಪಡೆದಿದೆ. ಆಹಾರವೆಂದು ತಿಂದ ಅವರ ಮಗ ಸಾವನ್ನಪ್ಪಿದ್ದಾನೆ.